ಹೀಗೊಂದು ಟಾಪ್ ಪ್ರಯಾಣ

Author : ಈರಪ್ಪ ಎಂ. ಕಂಬಳಿ

Pages 152

₹ 99.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಈರಪ್ಪ ಎಂ. ಕಂಬಳಿ ಅವರು ಬರೆದ ಲಲಿತ ಪ್ರಬಂಧ-ಹೀಗೊಂದು ಟಾಪ್ ಪ್ರಯಾಣ. ಉತ್ತರ ಕರ್ನಾಟಕದ ಹಳ್ಳಿಗಾಡಿನ ಪ್ರದೇಶದಲ್ಲಿ ಸಾರಿಗೆ ಸೌಲಭ್ಯ ಕಡಿಮೆ ಸಿಕ್ಕ ಸಾರಿಗೆಯನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಪ್ರಯಾಣಿಸುವುದು ಅನಿವಾರ್ಯ. ಈ ಅನಿವಾರ್ಯತೆಯನ್ನೇ ಲೇಖಕರು ಉತ್ತಮ ಲಲಿತ ಪ್ರಬಂಧವಾಗಿಸಿದ್ದಾರೆ. ವಾಹನದ ಮೇಲೆ ಕುಳಿತು ಹೋಗುವಾಗ ಎಡ-ಬಲದ ಪ್ರಕೃತಿಯ ಸೌಂದರ್ಯ ಸವಿಯುವುದೂ ಸೇರಿದಂತೆ ಅಲ್ಲಿಯ ಅನುಭವವೇ ವಿಶಿಷ್ಟ ಎಂದು ತಮ್ಮದೇ ಶೈಲಿಯಲ್ಲಿ ಓದುಗರ ಗಮನ ಸೆಳೆಯುತ್ತಾರೆ. ನಗರದ ಜನತೆಗೆ ಇದು ಅಪರಾಧ ಹಾಗೂ ಅಪಘಾತಕ್ಕೆ ಎಡೆ ಮಾಡಿಕೊಡುತ್ತದೆ ಎಂದೆನಿಸಿದರೂ ಜನತೆಯ ಅನಿವಾರ್ಯತೆ ಅಪರಾಧವಾಗಿಸುವುದಿಲ್ಲ ಹಾಗೂ ಅಪಘಾತವಿಲ್ಲದೇ ಪ್ರಯಾಣಿಸುತ್ತಲೇ ಬಂದ ಪರಿಯನ್ನು ಹೃದಯಂಗಮವಾಗಿ ಮತ್ತು ವ್ಯಂಗವಾಗಿ ಚಿತ್ರಿಸಿದ್ದಾರೆ. 10ನೇ ತರಗತಿಗೆ ಈ ಕೃತಿಯು ಪಠ್ಯವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2003ರ ಪುಸ್ತಕ ಬಹುಮಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ 2003ರ ಕುಂಬಾಸ ದತ್ತಿ ಪ್ರಶಸ್ತಿ ಲಭಿಸಿದೆ. 

About the Author

ಈರಪ್ಪ ಎಂ. ಕಂಬಳಿ
(05 August 1958)

ಕೊಪ್ಪಳ ಜಿಲ್ಲೆಯ ಯಲಬುರ್ಗದವರಾದ ಈರಪ್ಪ ಕಂಬಳಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದವರು. ಅರೆಸತ್ತ ಬದುಕು ಅವರ ಪ್ರಥಮ ಕವನ ಸಂಕಲನ.  ಹೆದ್ದಾರಿಗುಂಟ, ಹೀಗೊಂದು ಟಾಪ್‌ ಪಯಣ, ಚಾಚಾ ನೆಹರು ಮತ್ತು ಈಚಲ ಮರ, ಹುರುಳಿಕಟ್ಟು ಅವರ ಪ್ರಬಂಧ ಸಂಕಲನಗಳು. ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಅವರು ಸದ್ಯ ನಿವೃತ್ತರಾಗಿದ್ದಾರೆ. ...

READ MORE

Reviews

(ಹೊಸತು, ಜೂನ್, 2015, ಪುಸ್ತಕದ ಪರಿಚಯ)

ಹುಟ್ಟಿ-ಬೆಳೆದು-ತೊರೆದು ಬಂದ ಹಳ್ಳಿಗಾಡಿನ ಪರಿಸರ, ನಗರ ಜೀವನದ ಸಹಿಸಲೇ ಬೇಕಾಗಿರುವ ಅನಿವಾರ್ಯ ಪ್ರಸಂಗ – ಎರಡನ್ನೂ ಬಿಟ್ಟು ಕೊಡಲಾರದ ಇಕ್ಕಟ್ಟಿನ ಪರಿಸ್ಥಿತಿ ಲೇಖಕ ಶ್ರೀ ಈರಪ್ಪ ಕಂಬಳಿ ಅವರದ್ದು. ಎರಡೂ ಕಡೆ ಜೋಕಾಲಿ ತೂಗಿ ಸಮತೋಲನ ಕಾಪಾಡಿ ಇಲ್ಲಿನ ಬರಹಗಳನ್ನು ರೂಪಿಸಿದ್ದಾರೆ. ಹಲವು ವಿಸ್ಮಯಗಳು, ಘಟನೆಗಳು ಲೇಖಕರ ಮನದಲ್ಲಿ ಅಷ್ಟೊತ್ತಿ ನಿಂತು ವಿಚಲಿತರನ್ನಾಗಿಸಿವೆ. ಅವು ಇಂದಿನ ಬದಲಾದ ಪರಿಸರ, ಆಚರಣೆಗಳು, ಮನುಷ್ಯನ ಸ್ವಭಾವಗಳು ಮುಂತಾಗಿ ಹಲವು ದಿಕ್ಕುಗಳಲ್ಲಿ ಹರಿದು ಹಂಚಿಹೋಗಿ ಪ್ರಬಂಧಗಳ ಮೂಲಕ ಒಂದಾಗಿ ಮೂಡಿಬಂದಿವೆ. ಕಣ್ಣ ಮುಂದಿನ ಅಥವಾ ಅನುಭವದ ಯಾವ ವಿಷಯವಾದರೂ ಸರಿಯೆ, ಅದಕ್ಕೊಂದು ತನ್ನದೇ ಶೈಲಿಯ ವಿಮರ್ಶಾತ್ಮಕ ರೂಪ ಕೊಡುತ್ತಾರೆ. ಇಂದು ನಗರಗಳ ಜೀವನ ಸಹಿಸಲಸಾಧ್ಯವಾಗಿ ಜಿಗುಪ್ಪೆ ತರಿಸಿದ್ದು ನಿಜವಾದರೂ ಹಳ್ಳಿಗಳೇನೂ ಉದ್ಧಾರವಾಗಿಲ್ಲ. ಅವು ಸುಖದ ಸುಪ್ಪತ್ತಿಗೆಗಳೇನೂ ಅಲ್ಲ. ಇಲ್ಲಿದ್ದಾಗ ಅಲ್ಲಿ ಅಲ್ಲಿದ್ದಾಗ ಇಲ್ಲಿ ಮನಸ್ಸು ತುಡಿಯುವುದು ಸಹಜ. ಆದರೆ ಒಂದು ಮಾತು ನಿಜ ಅದೇನೆಂದರೆ ಈರಪ್ಪ ಕಂಬಳಿಯವರಂತೆ ಅನೇಕ ಮಂದಿಗೆ ಹಳ್ಳಿಯ ಪರಿಸರ ಸುಂದರ ಬಾಲ್ಯವನ್ನು ನೀಡಿ ನೆನಪಿಸಿಕೊಳ್ಳುವಂಥ ಸಹ್ಯ ವಾತಾವರಣ ನೀಡಿದೆ. ಪುಸ್ತಕದುದ್ದಕ್ಕೂ ತಿಳಿಹಾಸ್ಯ ಮಿಂಚಿದೆ. ವಿಸ್ತಾರವಾದ ವಿಷಯ ಮಂಡನೆ ಓದುಗನ ತಾಳ್ಮೆ ಪರೀಕ್ಷಿಸುತ್ತದೆ. ಮನಸ್ಸನ್ನು ಖುಷಿಗೊಳಿಸುವ ಶೈಲಿಯೂ ಆತ್ಮೀಯತೆಯದೇ.

Related Books