ವಿಚಾರಿತ

Author : ಜಿ.ಎಸ್. ಆಮೂರ

Pages 150

₹ 90.00




Year of Publication: 2013
Published by: ಸ್ವಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 40114455

Synopsys

‘ವಿಚಾರಿತ’ ಲೇಖಕ ಜಿ. ಎಸ್. ಆಮೂರ ಅವರ ಕೃತಿ. ತಲಸ್ಪರ್ಶಿ ಅಧ್ಯಯನ ಹಾಗೂ ಸಮಗ್ರ ನೋಟ ಆಮೂರರ ಬರವಣಿಗೆಯ ರಚನಾವಿನ್ಯಾಸವನ್ನು ರೂಪಿಸಿದೆ. ಆಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳ ಸ್ವರೂಪ ಚರಿತ್ರೆಯನ್ನು ತಮ್ಮ ಅಪಾರ ಪರಿಶ್ರಮ ಹಾಗೂ ಸೂಕ್ಷ್ಮ ಒಳನೋಟಗಳ ಮೂಲಕ ಆಮೂರರು ಕಟ್ಟಿಕೊಟ್ಟಿರುವ ಕ್ರಮ ಅನನ್ಯವಾದುದು. ಕನ್ನಡ ಸಂಸ್ಕೃತಿ ನಿರ್ಮಾಣದಲ್ಲಿ ಆಮೂರರು ತಮ್ಮನ್ನು ತೊಡಗಿಸಿಕೊಂಡಿರುವ ರೀತಿ ಯಾವುದೇ ಭಾಷೆಯ ಸಾಹಿತ್ಯ ಸಂಸ್ಕೃತಿಗೂ ಮಾದರಿಯಾಗಿರುವಂಥದು.

ಆಮೂರರು ಸತತಾಭ್ಯಾಸಿ. ಅವರು ಅನೇಕ ವರ್ಷಗಳ ಕಾಲ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ ಪ್ರಿಯ ಅಧ್ಯಾಪಕರಾಗಿದ್ದವರು. ವಿಶ್ವಸಾಹಿತ್ಯದ ಅನೇಕ ಮಹತ್ವದ ಕೃತಿ, ಲೇಖಕರು ಅವರ ಸಾಹಿತ್ಯ ಸಂಚಾರದ ತಂಗುದಾಣಗಳು. ಅಂತಹ ತಂಗುದಾಣಗಳಲ್ಲಿ ಅವರು ನಿಂತು ಕಂಡುಕೊಂಡ ದರ್ಶನ“ವಿಚಾರಿತ'ದಲ್ಲಿದೆ.

ವಾಲ್ಮೀಕಿ, ಹೋಮರ್, ಕಾಳಿದಾಸ, ಶ್ರೀರಂಗ ನೈಪಾಲ್ ಆರ್‌.ಕೆ. ನಾರಾಯಣ್, ರಾಜಾರಾವ್, ಅಮಿತಾವ್ ಘೋಷ್, ಭೈರಪ್ಪ, ಜಡಭರತ ಜಪಾನೀ ಸಾಹಿತ್ಯ, ಮರಾಠಿ ಸಾಹಿತ್ಯ-ಹೀಗೆ ಅವರ ಓದಿನ ವಿಸ್ತಾರದ ಫಲ-ಈ ಕೃತಿಯ ಮೂಲಕ ಕನ್ನಡ ಸಂಸ್ಕೃತಿಗೆ ದಕ್ಕಿದೆ.

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books