ಚಿತ್ರಕಲೆ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 88

₹ 45.00




Year of Publication: 2006
Published by: ಸಾಗರ ಪ್ರಕಾಶನ
Address: #1679, 10ನೇ ಮುಖ್ಯರಸ್ತೆ, 5ನೇ ಎ-ಕ್ರಾಸ್, ಬಿ.ಎಸ್.ಕೆ 2ನೇ ಹಂತ, 2ನೇ ಬ್ಲಾಕ್ ಬೆಂಗಳುರು-560050
Phone: 0809448494632

Synopsys

ಭಾರತೀಯ ಚಿತ್ರಕಲೆಯ ಸಂಕ್ಷಿಪ್ತ ಇತಿಹಾಸ, ಭಾರತೀಯ ಚಿತ್ರಕಲೆಯ ವಿಕಾಸ, ಅಜಂತಾದ ಕಲೆ, ದೇವಿಪ್ರಸಾದ ರಾಯ್ ಚೌಧರಿ, ರಾಗಮಾಲಾ ಚಿತ್ರಗಳು, ಸಂಸ್ಕೃತಿ ಮತ್ತು ಲಲಿತ ಕಲೆಗಳು ಮುಂತಾದ ವಿಷಯ ವೈವಿಧ್ಯಗಳು ಒಳಗೊಂಡ ಈ ಕೃತಿಯಲ್ಲಿ ಪ್ರಬಂಧಗಳಿವೆ. ಅತ್ಯಾಧುನಿಕ ಚಿತ್ರಕಲೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಚಿತ್ರಕಲೆ ಉಳಿಸಿಕೊಂಡು ಹೋಗುವ ಚಿಂತನೆಯೂ ಇದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಚಿತ್ರಕಲೆಗೆ ಸಾಕಷ್ಟು ಅವಕಾಶ ಇಲ್ಲ ಎಂಬ ಕೊರಗೂ ಇದೆ. ಈ ಎಲ್ಲ ಪ್ರಬಂಧಗಳ ಹಿಂದೆ ಅ.ನ.ಕೃ ಅವರ ಅಧ್ಪಯನದ ಪರಿಶ್ರಮ, ವಿಶ್ಲೇಷನಾತ್ಮಕ ಚಿಂತನೆ ಕಾಣಬಹುದು. ಈ ಕೃತಿಯು 1970 ರಲ್ಲಿ ಮೊದಲ ಮುದ್ರಣ ಕಂಡಿತ್ತು.

 

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books