ಮುಳುಗಿದವರು

Author : ತಿರುಪತಿ ನಾಯಕ್

Pages 120

₹ 100.00




Year of Publication: 2012
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಲೇಖಕರಾದ ತಿರುಪತಿ ನಾಯಕ್ ಅವರ  ’ ಮುಳುಗಿದವರು’ ಕೃತಿಯು ಪ್ರಬಂಧಗಳನ್ನು ಒಳಗೊಂಡಿದೆ.

ಲೇಖಕರ ಪ್ರಬಂಧಗಳು ಜನಪರ ಕಾಳಜಿ, ಮಾನವೀಯ ವ್ಯಕ್ತಿತ್ವದೊಂದಿಗೆ ಸಮಾಜದ ನೋವುಗಳಿಗೆ ಸ್ಪಂದಿಸುವ ರೀತಿ ಬರವಣಿಗೆಯಲ್ಲಿ ಛಾಪು ಮೂಡಿಸಿದೆ. ತಿರುಪತಿ ನಾಯಕ್ ಅವರು ವರಾಹಿ ಮುಳುಗಡೆ ಸಂದರ್ಭದಲ್ಲಿ ಸೇವೆ ಸಲ್ಲಿಸಿ ಅಲ್ಲಿನ ಸಂತ್ರಸ್ತರ ಆಕ್ರಂದನಗಳನ್ನು ಮನಗಂಡಿದ್ದಾರೆ. ಅವುಗಳ ನೈಜ ಚಿತ್ರಣವನ್ನು ’ಮುಳುಗಿದವರು’ ಕೃತಿಯಲ್ಲಿ ಚಿತ್ರಿಸಲಾಗಿದೆ.

ಅಮ್ಮ ಅರ್ಥವಾಗಿಲ್ಲ, ಎತ್ತಲ್ಲವದು ಮುತ್ತು – ಮತ್ತಿತರ ಪ್ರಬಂಧಗಳು ಗ್ರಾಮೀಣ ಜೀವನದ ಮಿಡಿತಗಳನ್ನು ಆಲಿಸಿವೆ. ನನಸಾದ ಕನಸು, ಭಾರತ್-ಪಾಕ್ ಭಾವೈಕ್ಯತೆಯ ಸಹೃದಯ ಸ್ಪಂದನವಾಗಿದ್ದು, ಇಡೀ ಪುಸ್ತಕ ಪ್ರೀತಿಯಿಂದ ಓದಿಸಿಕೊಂಡು ಹೋಗುತ್ತಾ ಹೊಸ ಚಿಂತನೆಯ ಮೊಳಕೆ ಚಿಗುರಿಸುತ್ತದೆ.

About the Author

ತಿರುಪತಿ ನಾಯಕ್

ತಿರುಪತಿ ನಾಯಕ್- 1968ರಲ್ಲಿ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು, ಆಶಿಹಾಳ ತಾಂಡದಲ್ಲಿ ಜನಿಸಿದರು. ಆಶಿಹಾಳ್, ಮುದಗಲ್, ಮುದ್ದೇಬಿಹಾಳ್, ಧಾರವಾಡ, ಚಿದಂಬರಂ ಊರುಗಳಲ್ಲಿ ವ್ಯಾಸಂಗ, ಕನ್ನಡ, ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ. ಮಲೆನಾಡಿನ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ರೆಡ್‌ಕ್ರಾಸ್‌ನಲ್ಲಿ ಸಕ್ರಿಯ ಸೇವೆ. ಕನ್ನಡದ ಪ್ರಸಿದ್ದ ಪತ್ರಿಕೆಗಳಲ್ಲಿ ಬರೆದ ಅನುಭವ. ಆಕಾಶವಾಣಿಗಳಲ್ಲಿ ಹಲವಾರು ಚಿಂತನಗಳು, 'ಹಳ್ಳಿಗಳು ಸಾಯುತ್ತಿವೆ' ಪ್ರಬಂಧ ಸಂಕಲನಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, 'ಗಂಧ ಕುಸುಮ', 'ಭಾವ ಬಯಲು', 'ದೀಪವಿಲ್ಲದ ದಾರಿ', 'ದಮನಿತೆ' ಕವನ ಸಂಕಲನಗಳು. 'ಮುಳುಗಿದವರು', 'ನದಿ ...

READ MORE

Related Books