ಸಾಹಿತ್ಯ ಸಂಪದ

Author : ಜಯದೇವಪ್ಪ ಜೈನಕೇರಿ

Pages 248

₹ 120.00




Year of Publication: 2004
Published by: ಶಾಂತಲಾ ಪ್ರಕಾಶನ
Address: #87, ಶಾಂತಲಾ ಜಿಲ್ಲಾ ಪಂಚಾಯತ್ ಎದುರು, ಕುವೆಂಪು ರಸ್ತೆ, ಶಿವಮೊಗ್ಗ-577201

Synopsys

`ಸಾಹಿತ್ಯ ಸಂಪದ’ ಜಯದೇವಪ್ಪ ಜೈನಕೇರಿ ಅವರ ಪ್ರಬಂಧ ಸಂಕಲನವಾಗಿದೆ. ಅಂತರಂಗದ ಅರಳುವಿಕೆಯೇ ಜೀವನದಲ್ಲಿ ಪ್ರಧಾನವಾಗಿರಬೇಕೆಂದು ತಮ್ಮ ತುಂಬು ಜೀವನದಲ್ಲಿಗಳಿಸಿದ ಅಪಾರ ಅನುಭವದ ನೆಲೆಯಲ್ಲಿ ನಿರೂಪಿಸಿದ್ದಾರೆ. ಉನ್ನತ ವಿಚಾರಗಳಿಂದಲೂ ಉತ್ತಮ ಸಂಸ್ಕಾರದಿಂದಲೂ ಪ್ರೇರಿತವಾದ ಒಳ್ಳೆಯ ಕೆಲವು ಮಾತುಗಳನ್ನು ಕೇಳ ಬಯಸುವವರಿಗೆ ಈ ಕೃತಿ ನಿರಾಶೆಯನ್ನುಂಟುಮಾಡುವುದಿಲ್ಲ.

About the Author

ಜಯದೇವಪ್ಪ ಜೈನಕೇರಿ

ಸಾಹಿತಿ, ಸಂಶೋಧಕ ಜಯದೇವಪ್ಪ ಜೈನಕೇರಿ ಅವರು ಮೂಲತಃ ಶಿವಮೊಗ್ಗದವರು. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದ ಇವರು ‘ಕೆಳದಿ ಅರಸರ ಯಶೋಗಾಥೆ’, ‘ಶರಣ ವೈಭವ’, ‘ವಚನಾಮೃತ’, ‘ಶರಣ ಸಂಪದ’, ‘ಸಾಹಿತ್ಯ ಸಂಪದ’ ಮುಂತಾದ ಕೃತಿಗಳನ್ನು ನೀಡಿದ್ದಾರೆ. ಅವರು 07 ಸೆಪ್ಟಂಬರ್‌ 2020ರಲ್ಲಿ ನಿಧನರಾದರು. ...

READ MORE

Reviews

ಹೊಸತು - ಮಾರ್ಚ್ -2005

ಬದುಕಿಗೆ ನೇರವಾಗಿ ಸಂಬಂಧಿಸಿದ ತಾತ್ವಿಕ ಚಿಂತನೆಗಳಿಂದ ಕೂಡಿದ ಇಲ್ಲಿನ ಬರಹಗಳು ಹೆಚ್ಚು ಆತ್ಮೀಯವಾಗಿ ಓದುಗರನ್ನು ತಲುಪುತ್ತವೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕಿವಿಮಾತುಗಳು ಸತ್ಯದ ನುಡಿಗಳಂತೆಯೂ, ಓರ್ವ ಹಿರಿಯ ಹಿತೈಷಿಯ ಬುದ್ಧಿವಾದದ ಮಾತುಗಳಂತೆಯೂ ನಮ್ಮನ್ನು ಸೆಳೆಯುತ್ತವೆ. ತಮ್ಮ ವ್ಯಕ್ತಿತ್ವವನ್ನು ತಾವೇ ಶ್ರೇಷ್ಠವಾಗಿ ರೂಪಿಸಿಕೊಳ್ಳುತ್ತ ಸಾಗುವ ಮನುಷ್ಯನು ಇತರರಿಗೆ ಮಾರ್ಗದರ್ಶಕನಾಗಿರಬೇಕು. ಯಾವುದೇ ಬಾಹ್ಯ ಆಕರ್ಷಣೆಯ ವಸ್ತುಗಳ ಬಗ್ಗೆ ಅತಿಯಾದ ವ್ಯಾಮೋಹ ಸಲ್ಲದು; ಅಂತರಂಗದ ಅರಳುವಿಕೆಯೇ ಜೀವನದಲ್ಲಿ ಪ್ರಧಾನವಾಗಿರಬೇಕೆಂದು ತಮ್ಮ ತುಂಬು ಜೀವನದಲ್ಲಿ ಗಳಿಸಿದ ಅಪಾರ ಅನುಭವದ ನೆಲೆಯಲ್ಲಿ ನಿರೂಪಿಸಿದ್ದಾರೆ. ಉನ್ನತ ವಿಚಾರಗಳಿಂದಲೂ ಉತ್ತಮ ಸಂಸ್ಕಾರದಿಂದಲೂ ಪ್ರೇರಿತವಾದ ಒಳ್ಳೆಯ ಕೆಲವು ಮಾತುಗಳನ್ನು ಕೇಳ ಬಯಸುವವರಿಗೆ ಈ ಕೃತಿ ನಿರಾಶೆಯನ್ನುಂಟುಮಾಡುವುದಿಲ್ಲ.

Related Books