ಮನನ

Author : ಎಂ. ಶಿವರಾಂ (ರಾಶಿ)

₹ 54.00




Year of Publication: 2009
Published by: ವಿವಿದ್‌ಲಿಪಿ
Address: 71, 4ನೇ ಕ್ರಾಸ್‌, ಕಾನ್‌ಕರ್ಡ್‌ ಲೇಔಟ್‌, ರಾಜರಾಜೇಶ್ವರಿ ನಗರ, ಬೆಂಗಳೂರು– 560059
Phone: 9535015489

Synopsys

ಲೇಖಕ ಡಾ. ಎಂ. ಶಿವರಾಂ (ರಾಶಿ) ಅವರ ಪ್ರಬಂಧ ಕೃತಿ ʼಮನನʼ. ಪುಸ್ತಕದ ಮುನ್ನುಡಿಯಲ್ಲಿ, “ಮನನದಲ್ಲಿನ ಪ್ರಬಂಧಗಳು ಹೊಸತನದಿಂದ ಕೂಡಿವೆ. ನಮ್ಮ ಸಮಾಜದ ಸಂಸ್ಕೃತಿಯಲ್ಲಿ ಅನೂಚಾನವಾಗಿ ಬಂದ ಹಲವು ನುಡಿಗಟ್ಟುಗಳು, ಸಂಪ್ರದಾಯಗಳನ್ನು ಮುಕ್ತ ಮನಸ್ಸು ಹಾಗೂ ತಾರ್ಕಿಕ ದೃಷ್ಟಿಯಿಂದ ಅವಲೋಕಿಸಿ, ಅವುಗಳ ಹಿನ್ನೆಯಲ್ಲಿರಬಹುದಾದ ಸತ್ಯಾಂಶಗಳನ್ನು ಹೆಕ್ಕಿ ತೆರೆಯುವುದು ಈ ಪ್ರಬಂಧಮಾಲೆಯ ಉದ್ದೇಶವಾಗಿದೆ. ಕಾಲ ಭೈರವ ಎಂಬ ಪುಟ್ಟ ಪ್ರಬಂಧದಲ್ಲಿ ಅವರು ಕಾಲದ ವೈಜ್ಞಾನಿಕ ಸ್ವರೂಪವನ್ನು ಸಾಮಾನ್ಯ ಜನರಿಗೆ ತಿಳಿಯುವ ಭಾಷೆಯಲ್ಲಿ ವಿವರಿಸಿದ್ದಾರೆ. ಶಕುನಗಳಲ್ಲಿನ ನಂಬಿಕೆಯಾಗಲೀ, ನಗುವಿನಂತಹ ಸಹಜ ಪ್ರಕ್ರಿಯೆಯಾಗಲೀ ರಾಶಿಯವರ ಚಿಂತನೆಯ ಮೂಸೆಯಲ್ಲಿ ಕರಗಿ ಹೊರಬರುವಾಗ ಅಪ್ಪಟ ಅಪರಂಜಿಯ ಹೊಳಹನ್ನು ಪಡೆಯುವ ಚಮತ್ಕಾರವನ್ನು ಇಲ್ಲಿ ಕಾಣಬಹುದು. ಅನೇಕ ಕೌತುಕಮಯ ವೈಜ್ಞಾನಿಕ ಚಿಂತನೆಗಳನ್ನು ನಮ್ಮ ಸನಾತನ ಧರ್ಮದ ಒರೆಗಲ್ಲಿನಲ್ಲಿ ತೀಡಿ ಮನನಯೋಗ್ಯವಾದ ಸಾಮ್ಯಗಳನ್ನು ರಾಶಿಯವರು ಈ ಪುಸ್ತಕದಲ್ಲಿ ಓದುಗರಿಗೆ ಉಣಬಡಿಸಿದ್ದಾರೆ” ಎಂದು ಹೇಳಲಾಗಿದೆ.

About the Author

ಎಂ. ಶಿವರಾಂ (ರಾಶಿ)
(10 November 1905 - 13 January 1984)

ಲೇಖಕ ಎಂ.ಶಿವರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ರಾಮಸ್ವಾಮಯ್ಯ. ತಾಯಿ- ಸೀತಮ್ಮ. ಬೆಂಗಳೂರಿನಲ್ಲಿಯೇ ಶಿಕ್ಷಣ ಪಡೆದ ಅವರು ಎಂ.ಬಿ.ಬಿ.ಎಸ್ ಓದುತ್ತಿರುವಾಗಲೇ ತಂದೆ ತೀರಿಕೊಂಡಿದ್ದರಿಂದ ಸಂಸಾರದ ಜವಾಬ್ದಾರಿ ಹೊರಬೇಕಾಯ್ತು. ಈ ವೇಳೆ ಸಾಹಿತಿ ಕೈಲಾಸಂ ಅವರು ವೈದ್ಯರಾಗಿ ಸೇವೆಸಲ್ಲಿಸುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದಾಗಿಯೇ ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿದ ಶಿವರಾಂ ಅವರು ಕೈಗಾರಿಕೋದ್ಯಮದಲ್ಲೂ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳೊಡನಾಟವಿದ್ದ ಅವರು ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ಕ್ಯಾನ್ಸರ್ ಸೊಸೈಟಿ ...

READ MORE

Related Books