ಭಾವಶುದ್ಧಿ 

Author : ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)

Pages 48

₹ 6.00




Year of Publication: 1992
Published by: ನ್ಯೂಸ್ಟಾರ್‍ ಪಬ್ಲಿಕೇಷನ್ಸ್
Address: 14, ಕಾರ್ಕಳ ಹೌಸ್, ಸಾರಕ್ಕಿ, ಜೆ.ಪಿ. ನಗರ, ಬೆಂಗಳೂರು-560028

Synopsys

ಭಾವಶುದ್ಧಿಯು ಅಂತರಂಗದಲ್ಲಿ ಸೂಚಿತವಾದ  ವೈಚಾರಿಕ ಲೇಖನಗಳ ಸಂಗ್ರಹ. ಬಸವರಾಜ ಮಠಪತಿ ಅವರ ವಿಚಾರ ಲಹರಿಯ  ಎರಡನೇ ಪುಸ್ತಕ.  ಹಿರಿಯ ಪ್ರಬಂಧಕಾರ ಲೇಖಕ ವೀರೇಂದ್ರ ಸಿಂಪಿಯವರ ಮುನ್ನುಡಿ ಇದೆ.  ಪ್ರಜಾವಾಣಿ , ಸಂಯುಕ್ತ ಕರ್ನಾಟಕ , ತರಂಗ , ಕಸ್ತೂರಿ,, ಮಂಜುವಾಣಿ, ದಿವ್ಯಜ್ಯೋತಿ ಮತ್ತು ಸಂತೃಪ್ತಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ.  ಬಸವರಾಜ ಅವರು ’ ಕ್ಷಿತಿಜ ಬೀದರ್ ' ಕಾವ್ಯನಾಮ ಬಳಸಲು ಆರಂಭಿಸಿದ್ದು ಈ ಗ್ರಂಥದಿಂದ.
ಬೀದರ್ ನಗರದಲ್ಲಿ ನಡೆದ ’ಅಖಿಲ ಭಾರತದ ಸಾಹಿತ್ಯ ಸಮ್ಮೇಳನದ ವಿಪರ್ಯಾಸ’  ಎಂದು  ಬರೆದ ಬಸವರಾಜ ಮಠಪತಿ ಅವರ ಬರಹವು ’ಕ್ಷಿತಿಜ ಬೀದರ್’ ಹೆಸರಿನೊಂದಿಗೆ ಪ್ರಜಾಮತ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.  ನಂತರದ ಲೇಖಕರ ಎಲ್ಲಾ ಪುಸ್ತಕಗಳು 'ಕ್ಷಿತಿಜ ಬೀದರ್’  ಕಾವ್ಯನಾಮದಲ್ಲಿಯೇ ಪ್ರಕಟಗೊಂಡಿವೆ. 
 

About the Author

ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)
(01 June 1954)

’ಕ್ಷಿತಿಜ್ ಬೀದರ್‌’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ  ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ  (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...

READ MORE

Related Books