ಕನ್ನಡ ಜಾನಪದ ಶಾಸ್ತ್ರ

Author : ಎಚ್.ಟಿ. ಪೋತೆ

Pages 204

₹ 150.00




Year of Publication: 2021
Published by: ಕುಟುಂಬ ಪ್ರಕಾಶನ
Address: ಅಭಯ್ ಪೂರ್ಣವರ್ಷ ಪ್ಲಾಟ್ ನಂ.140, ಪೂಜಾ ಕಾಲೋನಿ, ವಿಶ್ವವಿದ್ಯಾಲಯ ಅಂಚೆ, ಕುಸನೂರ ರಸ್ತೆ, ಕಲಬುರಗಿ
Phone: 9449163751

Synopsys

‘ಕನ್ನಡ ಜಾನಪದ ಶಾಸ್ತ್ರ’ ಪ್ರೊ.ಎಚ್.ಟಿ. ಪೋತೆ ಅವರ ಕೃತಿ. ಜನಪದ ಸಂಸ್ಕೃತಿ ಅಧ್ಯಯನದ ಬುಡಕಟ್ಟು ಅಧ್ಯಯನ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಈ ನೆಲೆಯಲ್ಲಿ ಅಲೆಮಾರಿಗಳು ಅರೆ ಅಲೆಮಾರಿಗಳಲ್ಲದೆ ಕಾಡು ಮೇಡುಗಳಲ್ಲಿ ವಾಸ ಮಾಡುವ ಸಣ್ಣಪುಟ್ಟ ಜನಸಮುದಾಯಗಳ ಕುರಿತು ತಲಸ್ಪರ್ಶಿಯಾದ ಅಧ್ಯಯನ ನಡೆಯುತ್ತಿದೆ. ಉದಾಹರಣೆಗೆ ತೋದವರು, ಕೊಡವರು, ಲಂಬಾಣಿಗಳು, ಹಾಲಕ್ಕಿ ಒಕ್ಕಲಿಗರು, ಕೊಂಚಿಕೊರಮರು, ಸುಡಗಾಜು ಸಿದ್ಧರು, ಮೊಗೇರರು, ಕಿಳ್ಳೆಕ್ಯಾತರು ಹೀಗೆ ಸಾವಿರಾರು ಬುಡಕಟ್ಟಿನ ಸಮುದಾಯುದವರು ಸಾಂಸ್ಕೃತಿವಾಗಿ ಒಂದೊಂದು ಭಾರತವೇ ಆಗಿದ್ದಾರೆ. ಅಪ್ಪಟ ದೇಶೀಯವರಾದ ಇವರನ್ನು ಶಿಷ್ಟವರ್ಗದವರು ಅಲಕ್ಷ್ಯ ಮಾಡಿ, ಅವರು ಕುಲದಿಂದ ಕೀಳರು, ಅನಾಗರಿಕರು ಎಂದು ಸಮಾಜದಿಂದ ದೂರಿಡುತ್ತ ಬಂದ ಪದ್ಧತಿಯನ್ನು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಫುಲವಾಗಿ ಕಾಣಬಹುದಾಗಿದೆ.

ಆಧುನಿಕ ಯುಗದಲ್ಲೂ ಮಧುರ ಕವಿಯಂತಹವರು ಬೀರನನ್ನು ಗೊರವನನ್ನು ಗೌರವಿಸಲಾರದವರು ಈಗಲೂ ಇದ್ದಾರೆ ಎನ್ನುತ್ತಾರೆ ಲೇಖಕ ಪ್ರೊ.ಎಚ್.ಟಿ.ಪೋತೆ. ಜನಪದ ಕಲಾ ಪ್ರದರ್ಶನದಿಂದ ಆನಂದ, ಸವಿಯುವ ಜನಸಮುದಾಯ ಅದರ ಉಪಯೋಗ ಪಡೆದು ವಾದ್ಯಗಾರರ, ಹಾಡುಗಾರರ, ನೃತ್ಯಗಾರರ ಕಲಾಪ್ರಾವೀಣ್ಯತೆಗೆ ಮೆಚ್ಚಿದ ಮೇಲೂ ಅವರ ಜಾತಿ ಎದುರಾದಾಗ ಸಾಮಾಜಿಕವಾಗಿ ದೂರಿಡುವ ವ್ಯವಸ್ಥೆ ನಮ್ಮದಾಗಿದೆ. ಅದು ದೂರಾಗಿ ಕಲೆ, ಕಲಾವಿದನನ್ನು ಸಮಾನವಾಗಿ ಗೌರವಿಸಿದಾಗ ನಿಜಕ್ಕೂ ನಮ್ಮ ತಳವರ್ಗದ ಸಂಸ್ಕೃತಿ ಸಂಪತ್ತು, ಜಾನಪದ ಜ್ಞಾನ ಹಾಗೂ ಅದರಲ್ಲಿ ವಿಜ್ಞಾನ ಜಗತ್ತು ಜೀವಂತವಾಗಿ ಬಹಳಕಾಲ ಉಳಿಯಬಹುದೆಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ. ಈ ಕೃತಿಯು ಕನ್ನಡ ಜಾನಪದ ಶಾಸ್ತ್ರವನ್ನು ಅಧ್ಯಯನಮಾಡುವವರಿಗೆ ಮಾರ್ಗದರ್ಶಿಯಾಗಲಿದೆ

About the Author

ಎಚ್.ಟಿ. ಪೋತೆ

ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...

READ MORE

Related Books