ಪಂಡಿತರ ತಪ್ಪು

Author : ಕೀರ್ತಿನಾಥ ಕುರ್ತಕೋಟಿ

Pages 102

₹ 60.00




Year of Publication: 2001
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.

Synopsys

ಕೀರ್ತಿನಾಥ ಕುರ್ತಕೋಟಿ ಅವರ ‘ಪಂಡಿತರ ತಪ್ಪು’ ಕೃತಿಯು ಪ್ರಬಂಧಸಂಕಲನವಾಗಿದೆ. ಈ ಕೃತಿಯು 17 ಅಧ್ಯಾಯಗಳಾದ, ಮಾತು ಮತ್ತು ಬರೆವಣಿಗೆ, ಹಳೆ ಹೊಸಗಳ ನಡುವೆ, ಕವಿತೆ ಮತ್ತು ಹಾಡು, ಕರಿದಿನದ ಹಬ್ಬ, ಪಂಡಿತರ ತಪ್ಪು, ನಾಟಕ ಪ್ರದರ್ಶನ, ಪತ್ತೇದಾರಿ ಸಾಹಿತ್ಯ, ಲೆವಲ್ ಕ್ರಾಸಿಂಗ್ ದಲ್ಲಿ ಇತಿಹಾಸ, ಭಾಷಾಂತರ, ಒಂದು ಹಳೆಯ ಪದ್ಯ, ಪರಕಾಯ ಪ್ರವೇಶ, ಕವಿ ಎಕ್ಕುಂಡಿಯವರ ತಾಳ ತಂಬೂರಿ, ಒಂದು ಪಠ್ಯಪುಸ್ತಕದ ಕಥೆ, ಕಲ್ಲಿನಲ್ಲಿ ಇನ್ನೊಂದು ಕಲೆ, ಗೆಳೆಯರ ಗುಂಪು, ಬೇಂದ್ರೆ ನೆನಪುಗಳು, ಕನ್ನಡ ಕಾವ್ಯದಲ್ಲಿ ಗೇಯತೆ ಇವುಗಳನ್ನು ಒಳಗೊಂಡಿರುತ್ತದೆ. ಕೃತಿಗೆ ಪ್ರಸ್ತಾವನೆ ಬರೆದಿರುವ ರಮಾಕಾಂತ ಜೋಶಿ ಅವರು, ಶ್ರೀ ಕೀರ್ತಿನಾಥ ಕುರ್ತಕೋಟಿಯವರು ಗ್ರಂಥಮಾಲೆಯ ಸಾಹಿತ್ಯ ಸಲಹೆಗಾರರೂ ಹೌದು, ಲೇಖಕರೂ ಹೌದು. ಕಳೆದ 50 ವರ್ಷಗಳಿಂದ ಬಿ. ಜೋಶಿಯವರ ಜೊತೆಗೂಡಿ ಅನೇಕ ಸಾಹಿತ್ಯ ಕೃತಿಗಳನ್ನು ಕೆತ್ತಿ ಮೆತ್ತಿ ಓದುಗರ ಕೈಗೆ ಅಂದವಾದ ಸಾಹಿತ್ಯ ಕೃತಿಗಳನ್ನಾಗಿ ಮಾಡಿ ನೀಡಿದ್ದಾರೆ. ಅವರ ಜೊತೆಗಿನ ಸಾಹಿತ್ಯ ಚರ್ಚೆ ಒಂದು ಅವಿಸ್ಮರಣೀಯ ಅನುಭವ. ಅವರ ಬರವಣಿಗೆಯ ಧಾಟಿ ಎಂಥವರನ್ನೂ ಮೋಡಿಗೊಳಿಸುತ್ತದೆ. ಕಳೆದ ಕೆಲವು ವರ್ಷಗಳ ಹಿಂದೆ ಅವರು 'ಪ್ರಜಾವಾಣಿ'ಯ ಸಮ್ಮುಖ ಎಂಬ ಶೀರ್ಷಿಕೆಯಡಿಯಲ್ಲಿ ಅನೇಕ ವಿಚಾರ ಪ್ರಚೋದಕ ಪ್ರಬಂಧಗಳನ್ನು ಬರೆದರು. ಅವುಗಳನ್ನು ಮೊದಲನೆಯ ಕಂತಾಗಿ ‘’ಉರಿಯ ನಾಲಗೆ'' ಎಂಬ ಪುಸ್ತಕವನ್ನಾಗಿ ಪ್ರಕಟಿಸಿದಾಗ, ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆಯಿತು. ನಂತರ ಎರಡನೆಯ ಕಂತಿನ ಲೇಖನಗಳನ್ನು ‘’ರಾಜಸ್ಪರ್ಶ'' ಎಂಬ ಪುಸ್ತಕವನ್ನಾಗಿ ಪ್ರಕಟಿಸಿದೆವು. ಈಗ ಮೂರನೆಯ ಕಂತಿನ ಲೇಖನಗಳನ್ನು ಪಂಡಿತರ ತಪ್ಪು'' ಎಂಬ ಹೆಸರಿನಿಂದ ಪ್ರಕಟಿಸುತ್ತಿದ್ದೇವೆ ಎಂದಿದ್ದಾರೆ.

About the Author

ಕೀರ್ತಿನಾಥ ಕುರ್ತಕೋಟಿ
(12 October 1928)

ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು  12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ...

READ MORE

Related Books