
ಪುಟ್ಟ ಪಾದಗಳ ಪುಳಕ ಜಿ. ಎನ್ ರಂಗನಾಥ ರಾವ್ ಅವರ ಲಲಿತ ಪ್ರಬಂಧಗಳ ರಚನೆಯಾಗಿದೆ. 'ಸಂವೇದನೆಯೂ ಕೋವಿಡ್ ಒಂದು ಮುಂಜಾನೆಯ' ಪ್ರಬಂದ ಪ್ರಾಚೀನದಿಂದ ಅರ್ವಾಚೀನದವರೆಗೆ ಅವರ ವಸ್ತುವ್ಯಾಪ್ತಿ ಇರುವುದನ್ನು ಸೂಚಿಸುವಂತಿದೆ. ಹೀಗೊಬ್ಬರು ವೈದ್ಯಭಾನು ಅವರ ತೀರ್ಥರೂಪರ ವ್ಯಕ್ತಿ ಚಿತ್ರವನ್ನು ಜೀವಂತವಾಗಿ ಕಟ್ಟಿಕೊಡುವಲ್ಲಿ ಪುತಿನ ಅವರ ಗೋಕುಲಾಷ್ಟಮಿ ಪ್ರಬಂಧವನ್ನು ನೆನಪಿಸುವಂತಿದೆ. ಕನ್ನಡದ ಸಹಜ ನುಡಿಗಟ್ಟಿನ ಬಳಕೆ ಮತ್ತು ಭಾವ ತನ್ಮಯತೆಯಿಂದ ಈ ಪ್ರಬಂಧವು ಕನ್ನಡದ ಶ್ರೇಷ್ಠ ಪ್ರಬಂಧಗಳ ಸಾಲಿಗೆ ಸೇರುವಂಥದ್ದಾಗಿದೆ. ಈಗ ಲಲಿತ ಪ್ರಬಂಧವಾಯಿತು, ಇಂಥ ಬೆರಗಿನ ಕ್ರಿಯಾಶೀಲ ಸರಕು ಮುಂದೆಯೂ ಈ ಮಾಗಿದ ಜೀವದ ಬತ್ತಳಿಕೆಯಿಂದ ಹೊರಬರಲಿದೆ ಎಂಬ ದೃಢ ವಿಶ್ವಾಸ ನನಗುಂಟು ಎಂಬುದು ಎಚ್.ಎಸ್.ವೆಂಕಟೇಶಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.