
ಮಿಲ್ಟ್ರಿಟ್ರಂಕು ಲಕ್ಷ್ಮಣ ವಿ.ಎ ಅವರ ಕೃತಿಯಾಗಿದೆ. ಬಾಲ್ಯಕಾಲದ ಮುಗ್ಧ ನಂಬಿಕೆಗಳು ಭಗ್ನವಾದ ಬಳಿಕ ಮತ್ತು ವೈಚಾರಿಕ ದೂರದಿಂದ ಪರಿಸರವನ್ನು ನೋಡುವುದರಿಂದ ಹುಟ್ಟಿರುವ ಚಿಂತನಶೀಲತೆ, ಇಲ್ಲಿನ ಬರೆಹವನ್ನು ರೂಪಿಸಿದೆ. ಆನುಭವವು ಚಿಂತನೆಗೆ ಬುನಾದಿಯಾಗುವ ಅಥವಾ ಚಿಂತನೆಯು ಅನುಭವಕ್ಕೆ ಚೌಕಟೊಂದನ್ನು ಕಟ್ಟುವ ಕಡೆಯಲ್ಲಿಲ್ಲ. ಬರಹ ವಾರ್ಶನಿಕವಾಗುತ್ತದೆ. ಸಹಜವಾದ ವಿವರಗಳು ದೊಡ್ಡ ಅರ್ಥವನ್ನು ಕೊಡುವ ಸಂಕೇತಗಳಾಗುತ್ತವೆ. ಉದಾಗೆ, ಮಗನನ್ನು ಆಸ್ಪತ್ರೆಗೆ ಕರೆದೊಯ್ಯುವ ತಂದೆ ರಸ್ತೆಬದಿ ವಾಹನಕ್ಕೆ ಕಾಯುವ ಪ್ರಸಂಗವನ್ನು ಗಮನಿಸಬಹುದು. ಬತ್ತಿಕಟ್ಟುವ, ಚಪ್ಪಲಿ ಕಳೆದುಹೋಗದಂತೆ ವಿಶಿಷ್ಟ ಗುರುತು ಮಾಡುವ, ಪಂಡರಪುರಕ್ಕೆ ಯಾತ್ರೆ ಹೋಗುವ, ಹೈನ ಮುಗಿದರೂ ಹಾಲುತುಪ್ಪದ ವಾಸನೆ ಪರಿಮಳ ಬೀರುವ ಕಪಾಟುಗಳು, ಪರಿಮಳ ಬೀರುವ ಎಲಿಟ್ಟು ಟ್ರಂಕು ಇತ್ಯಾದಿ ಪ್ರಸಂಗಗಳಲ್ಲಿ, ವಿವರಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಶ್ರದ್ಧೆಯಿಂದ ಇಲ್ಲಿನ ನೆನಪುಗಳಿಗೆ ಒಂದು ಬಗೆಯ ಜೈವಿಕ ಸದ್ಭುದ್ಧತೆ ಒದಗಿದೆ, ಕೆಲವು ನೆನಪುಗಳಂತೂ ಕಾವ್ಯಾತ್ಮಕವಾಗಿಯೂ ದಾರ್ಶನಿಕವಾಗಿಯೂ ಆಗಿದ್ದು, ಸುಂದರ ಪ್ರಬಂಧಗಳಾಗಿವೆ.

https://epaper.vishwavani.news/bng/e/bng/12-03-2023/16
©2025 Book Brahma Private Limited.