ಲೇಖಕಿ ಸುಮಾವೀಣಾ ಅವರ ಪ್ರಬಂಧಗಳ ಸಂಕಲನ-ಮನಸ್ಸು ಕನ್ನಡಿ. ಕೊರೊನಾ ಸಂದರ್ಭದಲ್ಲಿ ಬರೆದ ಪ್ರಬಂಧಗಳ ಜೊತೆ ಈ ಹಿಂದಿನ ಪ್ರಬಂಧಗಳು ಸೇರಿಸಿ ಒಟ್ಟು 21 ಪ್ರಬಂಧಗಳನ್ನು ಸಂಕಲಿಸಲಾಗಿದೆ. ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ ಅವರು ಕೃತಿಯ ಕುರಿತು ‘ ಪ್ರಬಂಧಗಳ ಭಾಷೆ, ನಿರೂಪಣೆ, ಸಂವಹನ ಓದುಗರನ್ನು ಸೆರೆ ಹಿಡಿದು ನಿಲ್ಲಿಸುತ್ತವೆ. ಕೊಡೆಯನ್ನು ಕುರಿತ ಪ್ರಬಂಧವಂತೂ ಅಪೂರ್ವವಾಗಿದೆ. ಇವರ ಸೂಕ್ಷ್ಮ ಸಂವೇದನೆಯ ಬರಹಗಳು ಇಲ್ಲಿ ಗಮನ ಸೆಳೆಯುತ್ತವೆ. ಲೇಖಕಿಯ ಬಹುವ್ಯಾಪ್ತಿಯುಳ್ಳ ಓದಿನ ವಿವಿಧ ಬಗೆಗಳು ಲೋಕಸಂಚಯದ ವಿವಿಧ ರಿವಾಜುಗಳು ಮಾಹಿತಿ ಲೋಕದ ನೂತನ ಸಂಗತಿಗಳು ಇಲ್ಲಿ ಓರಣವಾಗಿ ಅಕ್ಷರ ರೂಪ ಪಡೆದುಕೊಂಡಿವೆ’ ಎಂದು ಶ್ಲಾಘಿಸಿದ್ದಾರೆ.
©2021 Bookbrahma.com, All Rights Reserved