ಗುಜರಿ ಬಕೀಟಿನೊಂದಿಗೆ ಶಿವಾಯನಮಹ

Author : ಕೃಷ್ಣಮೂರ್ತಿ ಬಿಳಿಗೆರೆ

Pages 188

₹ 200.00




Year of Publication: 2023
Published by: ನಮ್ಮ ಪ್ರಕಾಶನ
Address: ಬಿಳಿಗೆರೆ, ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ- 572114
Phone: 9481490975

Synopsys

ಪ್ರಸ್ತುತ ಸಂಕಲನ ಆಪ್ತವಾದ ಬಾಲ್ಯಕಾಲದ ಜೀವನಾನುಭವಗಳಿಂದ ಆತ್ಮಕಥನವನ್ನು ಮಂಡಿಸುವಂತೆ ತೆರೆದುಕೊಳ್ಳತ್ತದೆ. ಎಲ್ಲೂ ಬಿಳಿಗೆರೆ ಈರ್ಷೆಯ ವಿಷಯಗಳತ್ತ ತಿರುಗಿಯೂ ನೋಡುವುದಿಲ್ಲ. ಕೃಷ್ಣಮೂರ್ತಿ ಅಳಿವಿನ ಅಂಚಿನ ವೃಕ್ಷ ಸಂಹಿತೆಯ ಬಗ್ಗೆ ಗಾಢವಾದ ವಿಷಾದ ವ್ಯಕ್ತಪಡಿಸುತ್ತಾರೆ. ಮರಗಿಡಗಳ ಬಗ್ಗೆ ಇರುವಷ್ಟು ವಿಶ್ವಾಸ ಖಂಡಿತ ಮನುಷ್ಯರ ಬಗ್ಗೆ ಇಲ್ಲ. ಅಷ್ಟರ ಮಟ್ಟಿಗೆ ಜೀವ ಜಾಲದ ಅಖಂಡತೆಯನ್ನು ಆವಾಹಿಸಿಕೊಂಡಿರುವ ಲೇಖಕರು ಹೇಳಬೇಕಾದ ಕಥನವನ್ನು ಪರಿಣಿತ ಕಥೆಗಾರರ ದಾಟಿಯಲ್ಲಿ ನಿರೂಪಿಸುತ್ತಾರೆ. ತೇಜಸ್ವಿ ಅವರ ಪ್ರಭಾವ ಅವರ ಮೇಲೆ ಇರುವಂತೆ ಕಾಣುತ್ತದೆ. ಛಿದ್ರ ಸಮಾಜಗಳ ಬಗ್ಗೆ ಎಷ್ಟು ಬರೆದರೂ ಅಷ್ಟೆಯೇ ಎಂಬಂತಿರುವ ಈ ಕಾಲದಲ್ಲಿ ನಮ್ಮನ್ನೆಲ್ಲ ಹಡೆದು ಸಲಹುತ್ತಲೇ ಬಂದಿರುವ ಭೂಮಿಗೆ ಆಳವಾದ ಗಾಯಗಳಾಗಿ ಬಿಟ್ಟರೆ ಯಾರು ಮುದ್ದಿಕುವವರು ಯುದ್ಧಗಳಿಂದಾದ ಅಣು ಬಾಂಬುಗಳ ಗಾಯಗಳು ಇನ್ನೂ ವಾಸಿ ಆಗಿಲ್ಲವಲ್ಲ ನಾಳೆ ಇನ್ನೇನೇನು ಮಹಾಗಾಯಗಳು ಮಹಾಯುದ್ಧಗಳಿಂದ ಆಗಬಲ್ಲವು ಎಂಬ ಆತಂಕವನ್ನು ಬಿಳಿಗೆರೆ ಸೂಕ್ಷ್ಮವಾಗಿ ಮುಟ್ಟಿಸುತ್ತಾರೆ. ಭೂಮಿಯ ಮೇಲಿನ ಮೂಲ ಜೈವಿಕ ಗುಣ ಎಂದರೆ ಬೀಜೋತ್ಪತ್ತಿ, ಭೂಮಿಯೇ ತನಗಾಗಿ ಸೃಷ್ಟಿಸಿಕೊಂಡಿದ್ದ ಬೀಜಗಳಿಂದ ಪರಿಸರದಲ್ಲಿ ಸಮತೋಲನ ಇತ್ತು. ಈಗ ಹೈಬ್ರಿಡ್ ಬೀಜಗಳಿಂದ ಏನೇನಾಗುತ್ತಿದೆ ಎಂದು ಎಲ್ಲೆಲ್ಲಿಗೋ ಜಿಗಿದು; ಇಡೀ ಭೂಮಿಯೇ ಒಂದು ಆಕಾಶ ಬೀಜ ಈ ಬೀಜ ಬರಡಾಗಿ ಚಂದ್ರನಂತೆ ಒಣ ಗುಂಡಾದರೆ ಆಗ ಏನು ಮಾಡುವುದು ಎಂಬ ಎಚ್ಚರಿಕೆಯನ್ನು ಬಿಳಿಗೆರೆ ಈ ಬರಹಗಳಿಂದ ನೀಡುತ್ತಾರೆ ಎನ್ನುತ್ತಾರೆ ಮೊಗಳ್ಳಿ ಗಣೇಶ್.

About the Author

ಕೃಷ್ಣಮೂರ್ತಿ ಬಿಳಿಗೆರೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಚರಿತ್ರೆಯ ಅನುಶೋಧನೆಯಲ್ಲಿ ತೊಡಗಿದ್ದಾರೆ. ಸಾವಯವ ಕೃಷಿ ಮತ್ತು ಮಳೆನೀರಿನ ಚಳುವಳಿಯಲ್ಲಿ ಸಕ್ರಿಯವಾಗಿರುವ ಬಿಳಿಗೆರೆಗೆ ತತ್ವಪದ ಮತ್ತು ಕೃಷಿಗಳನ್ನು ಹಾಡುವ ರೂಢಿಯಿದೆ. ಕಣ್ಮುಚ್ಚಾಲೆ ಮಕ್ಕಳ ಗುಂಪು, ನಮ್ಮ ಪ್ರಕಾಶನ ಮತ್ತು ಸಿರಿಸಮೃದ್ಧಿ ಬಳಗ ಮುಂತಾದ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ ಇವು ಇವರ ಕಾವ್ಯ ಕೃತಿಗಳು. ಜೀರಿಂಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ...

READ MORE

Related Books