ಅವರವರ ಭಕುತಿಗೆ

Author : ನಳಿನಿ ಮೈಯ

Pages 515

₹ 400.00




Year of Publication: 2017
Published by: ಕನ್ನಡ ಸಾಹಿತ್ಯ ರಂಗ
Address: ನ್ಯೂಜೆರ್ಸಿ, ಅಮೆರಿಕ

Synopsys

ಅವರವರ ಭಕುತಿಗೆ ಎಂಬುದು ನಳಿನಿ ಮೈಯ ಅವರ ಪ್ರಧಾನ ಸಂಪಾದಕತ್ವದಡಿ ಹಾಗೂ ಸುಮತಿ ಮುದ್ದೇನಹಳ್ಳಿ ಹಾಗೂ ಕಾವ್ಯಾ ನಾಗರಕಟ್ಟೆ ಅವರ ಸಂಪಾದಕತ್ವದಡಿ ಮೂಡಿದ ಪ್ರಬಂಧಗಳ ಸಂಕಲನ. ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅವರು ಕೃತಿಯ ಕುರಿತು ‘ಅಮೆರಿಕೆಯ ಕನ್ನಡಿಗರ ಕೃತಿ ಇದು. ಭಕ್ತಿ ಎಂದರೆ ಅವರಿಗೆ ಪರೋಕ್ಷವಾಗಿ ನಾಡು-ನುಡಿಯ ದರ್ಶನ. ನಾಡಿನ ಇತಿಹಾಸದ ದರ್ಶನ. ಭಕ್ತಿಯ ಸಂವೇದನೆಯಿಂದ ಒಂದು ಭಾಷೆ ಪಡೆಯುವ ಆಳ, ಬಾಗು, ಬಳಕು, ಭಾವಶಕ್ತಿ, ಇದೆಲ್ಲ ರೋಮಾಂಚಕ ಸಂಗತಿ. ಭಕ್ತಿಯು ಎಲ್ಲವನ್ನೂ ಕರಗಿಸಬಲ್ಲ ಬೆಂಕಿಯಾಗಿದೆ. ಕರಗದೇ ಹರಿಯುವುದಿಲ್ಲ. ಕರಗದೇ ಬೆಸೆಯುವುದಿಲ್ಲ. ಭಕ್ತಿಯು ಕರಗಿಸುವ, ಕರಗಿಸಿ ಹರಿಯಿಸುವ, ಹರಿಯಿಸಿ ಬೆಸೆಯುವಂತೆ ಮಾಡುವ ಹೃದಯದ ಪವಾಡವಾಗಿದೆ ಎಂದು ಕೃತಿಯಲ್ಲಿಯ ಪ್ರಬಂಧಗಳ ಕುರಿತು ಹೇಳಿದ್ದರೆ, ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಅವರು ‘ಇಲ್ಲಿಯ ಪ್ರಬಂಧಗಳನ್ನು ಓದಿದಾಗ ಎಷ್ಟೊಂದು ರೀತಿಯ ಕಾವ್ಯಾನುಭವಗಳಿಗೆ ಕಾರಣವಾಗಿದೆ ಎಂದು ಅರಿವಾಗಿ ಆಶ್ಚರ್ಯವಾಯಿತು. ಸ್ವತಃ ಮೂವರು ಸಂಪಾದಿಕೆಯರು, ಒಂದು ವಸ್ತುವನ್ನು ಇಟ್ಟುಕೊಂಡು ವಿವಿಧ ಬರಹಗಾರರಿಂದ ಲೇಖನಗಳನ್ನು ಬರೆಯಿಸಿರುವುದು ಸಾಮಾನ್ಯ ಸಂಗತಿಯಲ್ಲ; ಇದೊಂದು ಸಾಂಸ್ಕೃತಿಕ ಸಾಹಸ’ ಎಂದು ಪ್ರಶಂಸಿಸಿದ್ದಾರೆ.

About the Author

ನಳಿನಿ ಮೈಯ

ನಳಿನಿ ಮೈಯ ಅವರು ಡೇರಿಯನ್-ಇಲಿನಾಯ್ ನಲ್ಲಿ ಪತಿ ಸುಬ್ರಾಯ ಮೈಯ ಅವರೊಡನೆ ನೆಲೆಸಿದ್ದಾರೆ. ವೃತ್ತಿಯಲ್ಲಿ ಆಕ್ಯುಪೇಶನಲ್ ಥೆರಪಿಸ್ಟ್ ಆಗಿದ್ದವರು. ಈಗ ನಿವೃತ್ತರಾಗಿದ್ದಾರೆ. ಮರೀಚಿಕೆ ಮತ್ತು ಇತರ ಕಥೆಗಳು ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಶಿಕಾಗೋ ನಗರದ ವಿದ್ಯಾರಣ್ಯ ಕನ್ನಡ ಕೂಟದ ಸಕ್ರಿಯ ಸದಸ್ಯೆ. ಕೂಟದ ಸಂಗಮ ಪತ್ರಿಕೆಯ ಸಂಪಾದಕಿಯಾಗಿದ್ದರು. ಕನ್ನಡ ಸಾಹಿತ್ಯ ರಂಗದ ಅನೇಕ ಪುಸ್ತಕಗಳಿಗೆ ಸಂಪಾದಕ ಸಲಹಾ ಮಂಡಳಿಯಲ್ಲಿದ್ದು ಸೇವೆ ಮಾಡಿದ್ದಾರೆ. ಬೇಂದ್ರೆ ಅಂದ್ರೆ ಪುಸ್ತಕಕ್ಕೆ ನಾಗ ಐತಾಳರ ಜೊತೆ ಸಹಸಂಪಾದಕಿಯಾಗಿದ್ದರು. ಕನ್ನಡ ಸಾಹಿತ್ಯ ರಂಗದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಕನ್ನಡ ಸಾಹಿತ್ಯ ರಂಗದ ಕಾರ್ಯಕಾರಿ ...

READ MORE

Related Books