
'ತೋರ್ಬೆರಳು' ವೈಚಾರಿಕ ಪ್ರಬಂಧಗಳ ಸಂಕಲನವನ್ನು ಲೇಖಕ ಹೂ.ವೆ. ಶೇಷಾದ್ರಿ ಅವರು ರಚಿಸಿದ್ದಾರೆ. ಬಂಗ್ಲಾ ಸಮರ, 1971ರ ಮಧ್ಯಂತರ ಚುನಾವಣೆ, ದೇಶದ ನಿರಾಶ್ರಿತರ ಸಮಸ್ಯೆಗಳನ್ನು ಕುರಿತು ಗಾಢ ಚಿಂತನ. ಇಂದಿನ ’ವಾದ’ಗಳ ಧರ್ಮಸಂಕಟ ಸ್ಥಿತಿಯ ಬಗ್ಗೆ ವಿಶೇಷ ಮಂಥನ. ಭಾರತೀಯ ಸಮಾಜದ ಬಹುಮುಖ ದರ್ಶನ. ಭಾರತದ ಭವಿಷ್ಯದ ತೋರ್ಬೆರಳನ್ನು ಗುರುತಿಸಿ ದಾಖಲಿಸಿರುವ ವೈಚಾರಿಕ ಪ್ರಬಂಧಗಳ ಸಂಕಲನವೇ ’ತೋರ್ಬೆರಳು’ ಗ್ರಂಥ. ಸರಳ ಕನ್ನಡ ಭಾಷೆಯಲ್ಲಿ ಈ ಕೃತಿಯು ರಚಿತವಾಗಿದೆ. ಭಾರತದ ಸಮಾಜದ ಸ್ಥಿತಿ ಗತಿಗಳನ್ನು ಗಮನದಲ್ಲಿಟ್ಟುಕೊಂಡು ಲೇಖಕರು ಈ ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.