
‘ಬಾಡೂಟದ ಮಹಿಮೆ’ ಲೇಖಕ, ಛಾಯಾಗ್ರಾಹಕ ಕಲೀಮ್ ಉಲ್ಲಾ ಅವರ ಪ್ರಬಂಧ ಸಂಕಲನ. ಭಾರತದ ಸಾಂಸ್ಕೃತಿಕ ರಾಜಕಾರಣಗಳಲ್ಲಿ ಆಹಾರ ಪದ್ಧತಿಯೂ ಶೋಷಣೆಯ ಮೂಲವಾದ ನಿದರ್ಶನಗಳಿವೆ. ಮಾಂಸಾಹಾರದ ಬಗ್ಗೆ ಒಂದು ರೀತಿಯ ಅಪರಾಧಿ ಭಾವವನ್ನು ಜನರಲ್ಲಿ ತುಂಬಲಾಗುತ್ತದೆ. ಕರ್ನಾಟಕದ ಮಟ್ಟಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಸೇವನೆ ನಿಷೇಧ ಎನಿಸುವಂತೆಯೂ ಬಿಂಬಿಸಲಾಗುತ್ತದೆ. ಇದು ಆಹಾರ ರಾಜಕಾರಣ ಎನ್ನಬಹುದು. ಇದೇ ಕಾರಣಕ್ಕೆ ಮಾಂಸಾಹಾರ ಒಂದು ವಿಶೇಷತೆಯನ್ನು ಪಡೆದುಕೊಳ್ಳುತ್ತದೆ ಎನಿಸುತ್ತದೆ. ಈ ಪುಸ್ತಕದಲ್ಲಿ ಕಲೀಮ್ ಉಲ್ಲಾ ಅವರು ಬಾಡೂಟದ ಸುತ್ತ ನಡೆವ ರಂಜನೆ, ಕೋಲಾಹಲ, ಕುತೂಹಲ, ಆಸೆ, ನಿರಾಶೆ ಎಲ್ಲವನ್ನು ತಮ್ಮ ಪ್ರಬಂಧಗಳಲ್ಲಿ ಸೆರೆ ಹಿಡಿದಿದ್ದಾರೆ.
©2025 Book Brahma Private Limited.