
ಸಾಹಿತಿ ದಿಗ್ಗಜ ಡಾ. ಡಿ.ವಿ. ಗುಂಡಪ್ಪನವರ ಕೃತಿ-ಕಾವ್ಯ-ಸ್ವಾರಸ್ಯ. ಸೌಂದರ್ಯ ತ್ರಿಕೂಟ ಎಂಬ ಉಪಶೀರ್ಷಿಕೆ ನೀಡಲಾಗಿದೆ. ಕಾವ್ಯದ ಸ್ವಭಾವ -ರಸಾನುಭವಗಳನ್ನು ಲೇಖಕರು ಚರ್ಚಿಸಿದ್ದಾರೆ. ಸೌಂದರ್ಯ ತ್ರಿಕೂಟ, ಸಹಿತತೆಯಿಂದ ಸಾಹಿತ್ಯ, ಸಾಹಿತ್ಯ ಸಂಹಿತೆ, ರಸ, ರಸ ಭ್ರಾಂತಿ, ಕಾವ್ಯದ ಕೆಲಸ, ಷೇಕ್ಸ್ ಪಿಯರಿಗೆ ನಮಸ್ಕಾರ, ಮಹಾಭಾರತದ ಪಾತ್ರಗಳು, ಕಾವ್ಯವು ಸ್ವಭಾವೋಲ್ಲಾಸ ಹೀಗೆ ವಿವಿಧ ವಿದ್ವತ್ ಪೂರ್ಣ ಪ್ರಬಂಧಗಳನ್ನು ಇಲ್ಲಿ ಸಂಕಲಿಸಲಾಗಿದೆ. ಕಾವ್ಯರಸಾನುಭೂತಿಗೆ ಲೇಖಕರು ‘ಮಹಾಭಾರತದ ಪಾತ್ರಗಳು’ ಎಂಬ ಅಪೂರ್ವವಾದ ಪ್ರಬಂಧವನ್ನು ಸೇರ್ಪಡೆಗೊಳಿಸಿದ್ದಾರೆ. ಲೇಖಕರು ಗೀತೋಪನ್ಯಾಸಗಳನ್ನು ಕೊಟ್ಟಾಗ ಅದಕ್ಕೆ ಭೂಮಿಕೆಯಾಗಬೇಕೆಂದು ಬರೆದುಕೊಂಡಿದ್ದ ಟಿಪ್ಪಣಿಗಳ ಸಂಗ್ರಹವೂ ಆಗಿದೆ.
©2025 Book Brahma Private Limited.