ಆಚಾರ್ಯ ವಿನೋಬಾ ಭಾವೆ : ಜೀವನದ ನೂರೆಂಟು ಅನ್ವೇಷಣೆಗಳು

Author : ಗಿರೀಶ ಜಕಾಪುರೆ

Pages 180

₹ 150.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು, 560040
Phone: 9448804905

Synopsys

ಗಾಂಧೀಜಿಯವರ ಸಾವಿನ ನಂತರ ದೇಶ ತಂದೆಯನ್ನು ಕಳೆದುಕೊಂಡ ಮಗುವಿನಂತೆ ದಿಶಾಹೀನವಾಗಿತ್ತು. ನಮಗೆ ಇನ್ನು ಯಾರು ಗತಿ? ಯಾರು ಇನ್ನು ನಮ್ಮ ಮನೆಗೆ ಹಿರಿಯರು? ಯಾರು ನಮ್ಮ ನಾಡಿಗೆ ಮಾರ್ಗದರ್ಶಕರು? ಎಂಬ ಪ್ರಶ್ನೆ ಕಾಡತೊಡಗಿತ್ತು. ಆಗ ಉತ್ತರದಂತೆ, ಒಂದು ಸಮರ್ಪಕ ಪರ್ಯಾಯದಂತೆ ಕಂಡವರು ಭಾರತರತ್ನ ವಿನೋಬಾ ಭಾವೆಯವರು. ಗಾಂಧೀಜಿಯವರ ಮಾನಸಪುತ್ರರಾಗಿದ್ದ ವಿನೋಬಾ ನಡೆನುಡಿಯಲ್ಲಿಯೂ ಗಾಂಧೀಜಿಯವರ ಪ್ರತಿರೂಪದಂತಿದ್ದರು. ಅದಕ್ಕೆಂದೇ ಗಾಂಧೀಜಿ ವಿನೋಬಾ ನನ್ನ ಆಧ್ಯಾತ್ಮಿಕ ಉತ್ತರಾಧಿಕಾರಿ ಎಂದು ಹೇಳುತ್ತಿದ್ದರು ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿನೋಬಾರ ಮಹತ್ತರ ಪಾತ್ರ ಗುರುತಿಸಿ ಅವರನ್ನು ಪ್ರಥಮ ಸತ್ಯಾಗ್ರಹಿ ಎಂದು ಸಂಬೋಧಿಸಿದರು. ವಿನೋಬಾ ಬರಿಗಾಲಿನ ಫಕೀರರಾಗಿ ಭೂದಾನ ಚಳುವಳಿಯ ಸಂದರ್ಭದಲ್ಲಿ ದೇಶದುದ್ದಗಲಕ್ಕೂ ಸುಮಾರು 80000 ಕಿ.ಮಿ. ಪಾದಯಾತ್ರೆ ಕೈಗೊಂಡರುಹಾಗೂ ಲಕ್ಷಾವಧಿ ಎಕರೆ ಭೂಮಿಯನ್ನು ಶ್ರೀಮಂತರಿಂದ ಪಡೆದು ಬಡವರಿಗೆ ಹಂಚಿದರು. ಅತ್ಯಂತ ಕಟ್ಟುನಿಟ್ಟಿನ ಹಾಗೂ ಸನ್ಯಸ್ತ ಬದುಕು ಅವರದು. ಅವರು ತಮ್ಮ ಜೀವನದುದ್ದಕ್ಕೂ ಅನೇಕ ಅಧ್ಯಾತ್ಮಿಕ, ವೈಚಾರಿಕ, ಸಾಮಾಜಿಕ ಹಾಗೂ ಸತ್ಯಶೋಧಕ ಪ್ರಯೋಗಗಳನ್ನು ಮಾಡಿದರು ಹಾಗೂ ಸದಾಕಾಲ ಬದುಕಿನ ಅರ್ಥನ್ವೇಷಣೆ ಮಾಡಿದರು. ವಿನೋಬಾರ ಜೀವನದೃಷ್ಟಿ ಮತ್ತು ಲೋಕದೃಷ್ಟಿಯ ಕುರಿತಾದ ಹಾಗೂ ಬದುಕಿನ ಕುರಿತಾದ 108 ಪ್ರಸಂಗಗಳನ್ನು ಈ ಕೃತಿ ಒಳಗೊಂಡಿದೆ. 

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Related Books