ಮಹಾತ್ಮ ಗಾಂಧೀಜಿ

Author : ಬೆ.ಗೋ. ರಮೇಶ್

Pages 120

₹ 100.00




Year of Publication: 2018
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003
Phone: 23313400

Synopsys

‘ಮಹಾತ್ಮ ಗಾಂಧೀಜಿ’ ಲೇಖಕ ಬೆ.ಗೋ ರಮೇಶ್ ಅವರ ಕೃತಿ. ಮಹಾತ್ಮ ಗಾಂಧಿಯವರು ಜನಿಸಿ 150 ವರ್ಷಗಳಿಗೂ ಮೇಲಾದವು. ಅವರು ಕೊಲೆಯಾಗದಿದ್ದಿದ್ದರೆ 120 ವರ್ಷಗಳು ಬದುಕುತ್ತಿದ್ದರು. ಹಾಗೆಂದು ಅವರೇ ಮಾನವನ ಆಯುಷ್ಯ ಕುರಿತು ಹೇಳುವಾಗ ಹೇಳಿದ ಮಾತು. ಅವರು ಸಾಯಲಿಲ್ಲ. ಕೊಲೆಯಾದರು. ಇದರಿಂದ ಯಾವುದೋ ಸಾಧನೆ ಮಾಡಿದನೆಂದು ಕೊಲೆಗಾರ ಭಾವಿಸಿದ್ದನಷ್ಟೆ, ಗಾಂಧಿ ತೀರಿಕೊಂಡಿರ ಬಹುದು. ಆದರೆ ಗಾಂಧಿವಾದಕ್ಕೆ ಸಾವಿಲ್ಲ. ಗಾಂಧಿ ಭಾರತದೇಶದ ರಾಷ್ಟ್ರಪಿತ. ಭಾರತಕ್ಕೆ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟು ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅಂಥವರಿಗೆ ಆದರ್ಶವಾದವರು. ವಿಶ್ವಮಾನವರೇ ಆದರು.

ಗಾಂಧಿಯವರ ಜೀವನ ಚರಿತ್ರೆ ತಿಳಿಯುವುದೆಂದರೆ ಇಡೀ ಭಾರತದ ಇತಿಹಾಸ ತಿಳಿದಂತೆ, ಅವರು ಏನಾಗಿರಲಿಲ್ಲ ಎಂದು ಹೇಳುವುದು ಕಷ್ಟ. ಸ್ವಾತಂತ್ರ್ಯ ಹೋರಾಟಗಾರ, ಲೇಖಕ, ಪತ್ರಿಕೋದ್ಯಮಿ, ಹರಿಜನೋದ್ದಾರಕ, ಅಹಿಂಸಾವ್ರತಿ, ಸತ್ಯಸಂದ ಮೊದಲಾಗಿ ಇವೆಲ್ಲಕ್ಕೂ ಕಲಶ ಪ್ರಾಯದಂತೆ ಮಹಾತ್ಮರಾದವರು ಅವರ ಜೀವನ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ. 

About the Author

ಬೆ.ಗೋ. ರಮೇಶ್
(22 August 1945)

ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...

READ MORE

Related Books