ದೇವಿಪ್ರಸಾದ್ ಚಟ್ಟೋಪಾಧ್ಯಾಯ

Author : ಟಿ.ಎಸ್. ವೇಣುಗೋಪಾಲ್

Pages 92

₹ 60.00




Year of Publication: 2009
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಭಾರತೀಯ ದಾರ್ಶನಿಕ ವಿಚಾರಗಳನ್ನು ಕಾಲಕಾಲಕ್ಕೆ ಹೊಸ ಹೊಸ ದೃಷ್ಟಿಕೋನದಿಂದ ವಿಮರ್ಶಿಸಿ ಭಾರತೀಯ ತತ್ವಶಾಸ್ತ್ರಕ್ಕೆ ವಿನೂತನ ಆಯಾಮವನ್ನು ನೀಡಿದ ಎಡಪಂಥೀಯ ಚಿಂತಕರಲ್ಲಿ ಮುಖ್ಯ ಹೆಸರು ದೇವಿಪ್ರಸಾದ್ ಚಟ್ಟೋಪಾಧ್ಯಾಯ. ಭಾರತೀಯ ದರ್ಶನದ ಆಕರಗಳೆನಿಸಿದ ಪ್ರಾಚೀನ ವೇದ, ಸಂಹಿತಗಳನ್ನು ಪೂಜ್ಯಭಾವನೆಯಿಂದ ನೋಡುತ್ತಿದ್ದ ಸಂದರ್ಭದಲ್ಲಿ ಅವುಗಳನ್ನು ವೈಜ್ಞಾನಿಕ ನೆಲೆಗಟ್ಟಿನಿಂದ ವಿಮರ್ಶಾತ್ಮಕ ದೃಷ್ಟಿಕೋನದಿಂದ ಶೋಧಿಸಿ ಕೊಟ್ಟವರು ಇವರು. ಇಂತಹ ಅಗಾಧ ಪಾಂಡಿತ್ಯವಿದ್ದ ಚಿಂತಕ ಚಟ್ಟೋಪಾಧ್ಯಾಯರ ಬದುಕು-ಬರಹಗಳನ್ನು ಪರಿಚಯಿಸುವ ಕೃತಿಯಿದು. ಈ ಕೃತಿಯು ಒಳಗೊಂಡಿರುವ ವಿಷಯಗಳೆಂದರೆ:ದೇವಿಪ್ರಸಾದ್ ಚಟ್ಟೋಪಾಧ್ಯಾಯ ಬದುಕು-ಬರಹ ,ಭಾರತೀಯ ದರ್ಶನಗಳು ,ಮೀಮಾಂಸೆ ,ಭಾವನಾವಾದಕ್ಕೆ ಎದುರಾಗಿ ಭೌತವಾದ ,ಲೋಕಾಯತ ,ಭೌತಿಕವಾದ ಮತ್ತು ಭಾರತದ ವಿಜ್ಞಾನ ,ಬಿಡುಗಡೆಯ ಪ್ರಶ್ನೆ

About the Author

ಟಿ.ಎಸ್. ವೇಣುಗೋಪಾಲ್
(24 April 1955)

ಲೇಖಕ ಟಿ. ಎಸ್. ವೇಣುಗೋಪಾಲ್ ಅವರು ಮೈಸೂರಿನವರು. 1955 ಏಪ್ರಿಲ್ 24  ರಂದು ಜನನ. ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ. ‘ವಾದಿ ಸಂವಾದಿ, ಧರೆಗಿಳಿದ ನಾಟ್ಯತಾರೆ, ಗಾನವಸಂತ, ಭಗವದ್ಗೀತೆ, ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, ಪುರಾಣ ಮತ್ತು ವಾಸ್ತವ’ ಮುಂತಾದ ಕೃತಿಗಳನ್ನು ಲೇಖಕಿ ಶೈಲಜಾ ಅವರೊಂದಿಗೆ ಸಂಪಾದಿಸಿದ್ದಾರೆ. ...

READ MORE

Related Books