ಬಸವಣ್ಣನವರು

Author : ಎಂ. ಚಿದಾನಂದಮೂರ್ತಿ

Pages 100

₹ 130.00




Year of Publication: 2017
Published by: ಸ್ನೇಹ ಬುಕ್ ಹೌಸ್
Address: 165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು - 560050
Phone: 9845031335

Synopsys

''ನ್ಯಾಯ ನಿಷ್ಠುರಿ, ದಾಕ್ಷಿಣ್ಯವರ ನಾನಲ್ಲಯ್ಯ, ಲೋಕವಿರೋಧಿ, ಶರಣನಾರಿಗಂಜುವನಲ್ಲ ಕೂಡಲ ಸಂಗಮದೇವನ ರಾಜತೇಜದಲ್ಲಪ್ಪೆನಾಗಿ ಶರಣನಾರಿಗಂಜುವನಲ್ಲ’’ ಎನ್ನುವ ಬಸವಣ್ಣನವರ ಸಾಲುಗಳು ಇಲ್ಲಿ ಮುಖ್ಯವೆನ್ನಿಸುತ್ತದೆ. ಬಸವಣ್ಣನವರ ಜೀವನ ಚರಿತ್ರೆಯನ್ನು ವಿವರಿಸುವ ಈ ಕೃತಿಯಲ್ಲಿ ಹರಿಹರನ ರಗಳೆಗಳು ಪಾಲುಪಡೆದುಕೊಂಡಿದೆ. ಹರಿಹರನ ರಗಳೆ: ಕುಣಿಯುತ್ತಿರ್ಪ್ಪೆ ನಾನು ನೀನು ಕುಣಿಸಿದಂತೆ ಬಸವಲಿಂಗ | ಮರೆತುಬಿಡದೆ ಕರವ ಪಿಡಿದು ರಕ್ಷಿಸೆನ್ನ ಬಸವಲಿಂಗ. ಕಣ್ಣಮನಕೆ ತೆರವು ಕೊಟ್ಟು ನನ್ನ ಕಾಯೊ ಬಸವಲಿಂಗ | ಸೆರಗನೊಡ್ಡಿ ಬೇಡಿಕೊಂಬೆ ಕರುಣಿಸಯ್ಯ ಬಸವಲಿಂಗ | ಊನವಿರದ ತೆರೆದ ಸಮಾಧಾನ ಮಾಡೂ ಬಸವಲಿಂಗ. ಅಭಯವಿತ್ತು ಎನ್ನ ಇಷ್ಟ ಆಲಿಸಯ್ಯ ಬಸವಲಿಂಗ. ಅಭವ ನಿನ್ನ ಹೊರತು ಕಾಯ್ವೊರಾರೂ ಕಾಣಿ ಬಸವಲಿಂಗ | ಅಕ್ಕರಾದಿಗಳಿಗೆ ಇನ್ನವದೆಸೆಯುಂಟಿ ಬಸವಲಿಂಗ | ಬೇಡ ಪರರ ಒಲುಮೆ ನಿನ್ನ ಬೇಡಿಕೊಂಬೆ ಬಸವಲಿಂಗ | -ಆಂಧ್ರದ ಕವಿ ಪಾಲ್ಕುರಿಕೆ ಸೋಮನಾಥನ (13 ಶ.) ಕನ್ನಡ ''ಬಸವಲಿಂಗ ನಾಮಾವಳಿ'’ ಕೃತಿಯಿಂದ 'ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆ ಕೇಳ್ | ಬಸವನ ರೀತಿ ರೀತಿ ಬಸವಣ್ಣನ ಕಿಂಕರ ವೃತ್ತಿ ವೃತ್ತಿ ಮೇಣ್ | ಬಸವನ ಬಟ್ಟೆ ಬಟ್ಟೆ ಬಸವಣ್ಣನ ಅಂಕದ ಭಾಷೆ ಭಾಷೆ ಹೋ ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೆ ನೇಮವುರ್ವಿಯೊಳ್|

About the Author

ಎಂ. ಚಿದಾನಂದಮೂರ್ತಿ
(10 May 1931)

ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...

READ MORE

Related Books