ಜನ ಸಂಗಾತಿ ಭಗತ್

Author : ಎಚ್.ಎಸ್. ಅನುಪಮಾ

Pages 192

₹ 150.00




Year of Publication: 2021
Published by: ಲಡಾಯಿ ಪ್ರಕಾಶನ
Address: #21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

‘ಜನ ಸಂಗಾತಿ ಭಗತ್’ -ಡಾ.ಎಚ್.ಎಸ್. ಅನುಪಮಾ ಅವರು ರಚಿಸಿರುವ ಕೃತಿ. ಭಗತ್ ಸಿಂಗ್ ಅವರ ಜೀವನ ಚರಿತ್ರೆ. ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಅವರ ಜೀವನ ಕಥನವನ್ನು ಲೇಖಕಿಯು  ಅರ್ಥಪೂರ್ಣವಾಗಿ ಬರೆದಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ಭಗತ್ ಸಿಂಗ್ ಸ್ನೇಹಿತ ಸುಖದೇವನಿಗೆ ಬರೆದ ಪತ್ರದ ಆಯ್ದ ಭಾಗವಿದೆ. ಈ ಪತ್ರದಲ್ಲಿ. ಹದಿನಾಲ್ಕು ವರ್ಷ ಜೈಲಿನಲ್ಲಿದ್ದರೆ ಒಬ್ಬರ ಚಿಂತನೆಗಳು ಮೊದಲಿನಂತೆ ಉಳಿಯುವುದಿಲ್ಲ ಎಂದು ನೀನು ಭಾವಿಸಿರುವೆ. ಹಾಗಾದರೆ ಜೈಲಿನ ಹೊರಗೆ ಬದುಕುವ ಪರಿಸ್ಥಿತಿ ಬಹಳ ಉತ್ತಮವಾಗಿದೆಯೇ ಎಂದು ಕೇಳಬೇಕಾಗುತ್ತದೆ. ನಾವು ಪ್ರವೇಶಿಸದೇ ಇದ್ದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗುವುದೇ ಇಲ್ಲ ಎಂದು ಭಾವನೆಯಾಗಿದ್ದರೆ ಅದು ತಪ್ಪು, ನಾವು ಸಮಾಜ ಬದಲಾವಣೆಗೆ ನಮ್ಮ ಪ್ರಯತ್ನ ಮಾಡಿರಬಹುದು, ಅದರೆ ನಾವು ಕಾಲದ ಅವಶ್ಯಕತೆಗಳ ಉತ್ಪನ್ನ ಮಾತ್ರ ಎಂದು ನೆನಪಿಡು ಎಂದಿದ್ದಾರೆ. ಜೊತೆಗೆ, ನಾನು ಮತ್ತು ನೀನು ಈ ದೇಶದಲ್ಲಿ ಕಮ್ಯುನಿಸಂ ಮತ್ತು ಸೋಷಿಯಲಿಸಂ ಅನ್ನು ಸೃಷ್ಟಿಸಿ ಹರಡಿದವರಲ್ಲ. ಈ ದೇಶಕಾಲದ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ನಾವು ಗ್ರಹಿಸಲು ಸಾಧ್ಯವಾಯಿತು ಅಷ್ಟೇ ಎಂಬ ಪ್ರಬುದ್ಧ ಮಾತುಗಳಿವೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಆ ಮಹಾನ್ ನಾಯಕನ ಪೂರ್ಣ ವ್ಯಕ್ತಿತ್ವವನ್ನು ಅವರ ಮಾತು-ಪತ್ರಗಳ ಜೊತೆಗೆ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. 

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books