ಗಾನಗಂಧರ್ವ ಭೈರವಿ ಕೆಂಪೇಗೌಡ

Author : ಎನ್. ಜಗದೀಶ್ ಕೊಪ್ಪ

Pages 224

₹ 250.00




Year of Publication: 2021
Published by: ವಿಕಾಸನ
Address: ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ(ACU), ಬಿ.ಜಿ. ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ- 571448

Synopsys

‘ಗಾನಗಂಧರ್ವ ಭೈರವಿ ಕೆಂಪೇಗೌಡ’ ಲೇಖಕ ಡಾ.ಎನ್. ಜಗದೀಶ್ ಕೊಪ್ಪ ಅವರು ರಚಿಸಿರುವ ಭೈರವಿ ಕೆಂಪೇಗೌಡ ಅವರ ಜೀವನ ಚರಿತ್ರೆ. ಈ ಕೃತಿಗೆ ಲೇಖಕ ಎಂ.ಜಿ. ಚಂದ್ರಶೇಖರಯ್ಯ ಅವರ ಬೆನ್ನುಡಿಯ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ 'ಕರ್ನಾಟಕ ಸಂಗೀತದ ಅಪ್ರತಿಮ ಕಲಾವಿದರಾದ ಭೈರವಿ ಕೆಂಪೇಗೌಡರು ನಿಸ್ಸಂಶಯವಾಗಿ ಅತ್ಯುತ್ತಮ ಗಾಯಕರ ಸಾಲಿನಲ್ಲಿ ನಿಲ್ಲುತ್ತಾರೆ. ದುರಾದೃಷ್ಟವೆಂದರೆ ಅವರ ಹೆಸರು ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಆಶ್ಚರ್ಯಕರವೆಂಬಂತೆ ಕಣ್ಮರೆಯಾಗಿರುವುದರ ಹಿಂದೆ ವ್ಯವಸ್ಥಿತ ಪಿತೂರಿಯಿದೆ. ಮೈಸೂರು ವಾಸುದೇವಾಚಾರ್, ಡಿ.ವಿ.ಜಿ ಮುಂತಾದ ಕೆಲವೇ ಕೆಲವರು ಅತ್ಯಂತ ಸಂಕ್ಷಿಪ್ತವಾಗಿ ಭೈರವಿ ಕೆಂಪೇಗೌಡರನ್ನು ಕುರಿತು ಬರೆದಿರುವುದನ್ನು ಬಿಟ್ಟರೆ ಉಳಿದವರು ಆ ಬಗ್ಗೆ ಏನನ್ನೂ ಹೇಳಿರುವುದಿಲ್ಲ. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಶ್ರೇಷ್ಠ ಗಾಯಕರಾಗಿದ್ದ ಗಾನಗಂಧರ್ವ ಭೈರವಿ ಕೆಂಪೇಗೌಡರು ಮೈಸೂರು ಅರಸರು ಮತ್ತು ಸ್ವಾಮಿ ವಿವೇಕಾನಂದರ ಮೆಚ್ಚುಗೆ, ಪ್ರೀತಿ, ಅಭಿಮಾನಕ್ಕೆ ಪಾತ್ರರಾದ ಸಂತ-ಗಾಯಕ, ಬದುಕಿನ ಹೊಡೆತಗಳಿಂದ ನೊಂದ ಅವರು ಬೈರಾಗಿಯಂತೆ ಊರೂರು ಅಲೆಯುತ್ತ ಸಂಗೀತಪ್ರಿಯರ ಮುಂದೆ ಹೃದಯ ತುಂಬಿ ಹಾಡಿ ಜನಮನ ಸೂರೆಗೊಂಡವರು ಎನ್ನುತ್ತಾರೆ ಎಂ.ಜಿ. ಚಂದ್ರಶೇಖರಯ್ಯ. ಹಾಗೇ ಇಂತಹ ಮಹಾನ್ ಗಾಯಕನನ್ನು ಕುರಿತು ಡಾ. ಎನ್. ಜಗದೀಶ್ ಕೊಪ್ಪ ಅವರು ಅಪಾರ ಪರಿಶ್ರಮದಿಂದ ಮಾಹಿತಿ ಸಂಗ್ರಹಿಸಿ ಗಾನಗಂಧರ್ವ ಭೈರವಿ ಕೆಂಪೇಗೌಡ ಕೃತಿ ರಚಿಸಿದ್ದಾರೆ. ಆ ಮಹಾನ್ ಸಾಧಕನ ಜೀವನ ಚರಿತ್ರೆಯು ಸಂಗೀತಪ್ರಿಯರು ಮಾತ್ರವಲ್ಲ. ಎಲ್ಲರೂ ಓದಬೇಕಾದ ಕೃತಿ ಎಂದು ತಿಳಿಸಿದ್ದಾರೆ.

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Related Books