ಪ್ರೀತಿಯ ಹೊನಲು

Author : ಲಕ್ಷ್ಮೀನಾರಾಯಣ ನಾಗವಾರ

Pages 490

₹ 400.00




Year of Publication: 2018
Published by: ವಿಶಾಖ ಎಜುಕೇಷನ ಲ್, ಸೋಷಿಯಲ್ ಅಂಡ್ ಕಲ್ಚರಲ್ ಟ್ರಸ್ಟ್, 
Address: ‘ಮಿಲಿಂದ’ ನಂ 22/1, 16ನೇ ಕ್ರಾಸ್, ಕನಕನಗರ, ಆರ್‌. ಟಿ. ನಗರ ಅಂಚೆ, ಬೆಂಗಳೂರು - 32

Synopsys

ಲಕ್ಷ್ಮೀನಾರಾಯಣ ನಾಗವಾರ ಅವರ ಮೂವತ್ತು ವರ್ಷಗಳ ಬದುಕು, ಬರಹ, ಸಂಘಟನಾ ಚಳವಳಿ ಮತ್ತು ಸಾಧನೆಗಳನ್ನು ಕುರಿತ ಅವರ ಸ್ನೇಹ ಬಳಗ ಹೊರತಂದಿರುವ ಕೃತಿ ‘ಪ್ರೀತಿಯ ಹೊನಲು’. ಜಿ. ಕೆ. ಗೋವಿಂದರಾವ್, ಹಿ. ಚಿ. ಬೋರಲಿಂಗಯ್ಯ, ಎಚ್. ಎಸ್. ಶಿವಪ್ರಕಾಶ್, ಕೆ. ಸತ್ಯನಾರಾಯಣ, ಕೆ. ಪುಟ್ಟಸ್ವಾಮಿ, ಬಿ. ಕೆ. ಶಿವರಾಂ, ಮಂಜುನಾಥ್ ಅದ್ದೆ, ಕೆ. ವೈ. ನಾರಾಯಣಸ್ವಾಮಿ ಮುಂತಾದ 126 ವಿವಿಧ ಲೇಖಕರು ಲಕ್ಷ್ಮೀನಾರಾಯಣ ನಾಗಾವರ ಅವರ ಕುರಿತು ಬರೆದ ಲೇಖನಗಳ ಸಂಗ್ರಹ ಇದಾಗಿದ್ದು ಈ ಕೃತಿಯನ್ನು ನಾಗೇಂದ್ರ ಎಂಪಿ ಅವರು ಸಂಪಾದಿಸಿದ್ದಾರೆ.

 

About the Author

ಲಕ್ಷ್ಮೀನಾರಾಯಣ ನಾಗವಾರ

ಲಕ್ಷ್ಮೀನಾರಾಯಣ ನಾಗವರ ಅವರು ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದವರು. ತಮ್ಮ ವಿದ್ಯಾರ್ಥಿ ದಿನಗಳಲ್ಲೇ ದಲಿತ ಹಕ್ಕುಗಳ ಬಗ್ಗೆ ಧ್ವನಿಯನ್ನು ಎತ್ತುತ್ತಾ ಬಂದವರು. ಸಾಹಿತ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಹ ಅತ್ಯಂತ ಆಸ್ಥೆ ಹೊಂದಿದ್ದ ಅವರು ಕಾಲೇಜು ಜೀವನದಲ್ಲೇ ಸಮಾಜ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳ ಅಧ್ಯಾಪಕರಿಗೆ ಪ್ರೀತಿಯ ವಿದ್ಯಾರ್ಥಿಯಾಗಿ ‘ದಲಿತ ವಿದ್ಯಾರ್ಥಿ ಒಕ್ಕೂಟ’ದ ಮುಖಂಡರಾಗಿದ್ದರು.  ದಲಿತ ಹಿರಿಯ ನೇತಾರ ಬಿ. ಬಸವಲಿಂಗ ಅವರು ನಡೆಸಿದ ಬೂಸಾ ಚಳವಳಿಗೆ ಇಪ್ಪತ್ತೈದು ವರ್ಷಗಳಾದ ಸಂದರ್ಭದಲ್ಲಿ ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ : ಕಾಲು ಶತಮಾನ’ ಪುಸ್ತಕವನ್ನು ಸಂಪಾದಿಸಿ ಕನ್ನಡ ...

READ MORE

Related Books