ಶಾಸನ ಪಿತಾಮಹ ಬಿ.ಎಲ್. ರೈಸ್

Author : ಶ್ರೀನಿವಾಸ ಹಾವನೂರ

Pages 48

₹ 1.00




Year of Publication: 1978
Published by: ಐಬಿಎಚ್ ಪ್ರಕಾಶನ
Address: ಗಾಂಧಿನಗರ, ಬೆಂಗಳೂರು- 560009

Synopsys

ಶ್ರೀನಿವಾಸ ಹಾವನೂರು ಅವರು ರಚಿಸಿದ ಕೃತಿ ‘ಶಾಸನ ಪಿತಾಮಹ ಬಿ.ಎಲ್. ರೈಸ್’. ಕನ್ನಡ ಭಾಷೆ, ಸಾಹಿತ್ಯ, ಶಾಸನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಮೈಸೂರು ಪ್ರಾಂತ್ಯದ ಶಾಸನಶಾಸ್ತ್ರದ ಪಿತಾಮಹ ಎಂದೇ ಖ್ಯಾತರಾದ ಸಂಶೋಧಕ ಬೆಂದಮಿನ್ ಲೂಯಿ ರೈಸ್. ಇವರು ಶಾಸನಗಳ ಸಂಶೋಧನೆಯನ್ನು ಮೂಲಾಧಾರವಾಗಿಸಿಕೊಂಡು ಸಾಹಿತ್ಯ ಮತ್ತು ಇತಿಹಾಸಗಳಿಗೆ ನಿಖರರೂಪ ನೀಡಿದವರಲ್ಲಿ ಪ್ರಮುಖರು. ಇವರಿಗಿಂತಲೂ ಸ್ವಲ್ಪ ಮೊದಲು ಜಾನ್ ಫ್ಲೀಟರ್ ಉತ್ತರ ಕರ್ನಾಟಕದ ಪ್ರದೇಶದಲ್ಲಿ ಕ್ಷೇತ್ರಕಾರ್ಯ ಕೈಗೊಂಡು ಶಾಸನ ಸಂಗ್ರಹಕ್ಕೆ ಮೊದಲಾದರೂ, ಪುಸ್ತಕರೂಪದಲ್ಲಿ ಅನೇಕ ಸಂಪುಟಗಳನ್ನು ಪ್ರಕಟಿಸಿದವರು ಮಾತ್ರ ಬೆಂಜಮಿನ್ ರೈಸ್. ತಮ್ಮೆಲ್ಲ ಅನ್ವೇಣೆಗಳನ್ನೂ "ಎಪಿಗ್ರಾಫಿಕಾ ಕರ್ನಾಟಿಕಾ" ಎಂಬ ಬೃಹತ್‌ಸಂಪುಟಗಳಲ್ಲಿ ದಾಖಲಿಸಿ ಕನ್ನಡ ನಾಡಿನ ಸಂಶೋಧನಾ ಲೋಕಕ್ಕೆ ಭದ್ರ ತಳಪಾಯ ಹಾಕಿದವರು ಅವರ ಅವರ ಬದುಕು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books