ಆಚಾರ್ಯ ಸಂಪಾದಕ ಶ್ರೀನಾರಾಯಣ ದತ್ತ

Author : ಜಿ. ಭಾಸ್ಕರ ಮಯ್ಯ

Pages 280

₹ 250.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಮೈಸೂರಿನ ತೆಲುಗು ಮನೆಮಾತಿನ ಕುಟುಂಬದಲ್ಲಿ ಜನಿಸಿ ಹಿಂದಿ ಪತ್ರಿಕಾರಂಗದಲ್ಲಿ ಅತ್ಯುತ್ತಮ ಸಂಪಾದಕರೆಂದು ಖ್ಯಾತಿ ಪಡೆದ ಶ್ರೀ ನಾರಾಯಣದತ್ತರು (1929-2014) ಒಬ್ಬ ವಿಶಿಷ್ಟ ವ್ಯಕ್ತಿ. ಬಾಲ್ಯದಲ್ಲೇ ಅವರು ದೂರದ ಉತ್ತರ ಭಾರತದಲ್ಲಿ ಸ್ವಾಮಿ ಶ್ರದ್ದಾನಂದರು ಸ್ಥಾಪಿಸಿದ್ದ ಗುರುಕುಲ ಕಾಂಗಡೀ ವಿದ್ಯಾ ಸಂಸ್ಥೆಗೆ ಸೇರಿ ಅತ್ಯುಚ್ಚ ಶ್ರೇಣಿಯಲ್ಲಿ ವಿದ್ಯಾಲಂಕಾರ ಪದವಿ ಪಡೆದು, 1952ರಲ್ಲಿ ಮುಂಬಯಿಯಲ್ಲಿ ಹಿಂದಿ ಪತ್ರಿಕಾರಂಗವನ್ನು ಪ್ರವೇಶಿಸಿದರು. ಮುಂದೆ 'ನವನೀತ' ಪತ್ರಿಕೆಯ ಸಂಪಾದಕರಾಗಿ ಕಡೆಗೆ ಪಿ.ಟಿ.ಐ. ಫೀಚರ್ ಮುಖ್ಯ ಸಂಪಾದಕರಾಗಿ ನಿವೃತ್ತರಾಗಿ, ಕಡೆಯ ಹದಿನೈದು ವರ್ಷಗಳನ್ನು ಬೆಂಗಳೂರಲ್ಲಿ ಕಳೆದರು. ದತ್ತರು ಕಾಲವಾದಾಗ ಹಿಂದಿ ಪತ್ರಿಕಾರಂಗದ ಮಾರ್ಗದರ್ಶಕ ಆಚಾರ್ಯ ಸಂಪಾದಕರ ಭವ್ಯ ಪರಂಪರೆಯ ಕಡೆಯ ಕೊಂಡಿ ಕಳಚಿಹೋಯಿತೆಂಬ ಕೊರಗು ಅನೇಕ ಪ್ರಮುಖ ಲೇಖಕರನ್ನು ಕಾಡಿಸಿತು.

ಆ ಪುಸ್ತಕದ ಬಗ್ಗೆ ಮಾತನಾಡುತ್ತ ಹಿರಿಯ ಆಡಳಿತಾಧಿಕಾರಿಯೂ, ಚಿಂತಕ, ಲೇಖಕರೂ ಆದ  ಚಿರಂಜೀವಿ ಸಿಂಗ್ - 'ದತ್ತರ ಲೇಖನಗಳು ದೇಶದ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕು, ಈ ಪುಸ್ತಕ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು' ಎಂದಿದ್ದಾರೆ.

About the Author

ಜಿ. ಭಾಸ್ಕರ ಮಯ್ಯ

ಡಾ.ಜಿ. ಭಾಸ್ಕರಮಯ್ಯ ರವರು ಕುಂದಾಪುರದ ಭಂಡಾರಕರ ಕಾಲೇಜು ಮತ್ತು ಮುಲ್ಕಿ ಕಾಲೇಜುಗಳಲ್ಲಿ ಒಟ್ಟು ನಾಲ್ಕು ದಶಕಗಳಿಗೂ ಮೀರಿ ಸಂಸ್ಕೃತ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಗಳನ್ನೂ, ತತ್ವಶಾಸ್ತ್ರ, ಪ್ರಾಕ್ತನಶಾಸ್ತ್ರಗಳನ್ನು ಬೋಧಿಸಿ, ಹಿಂದಿ ಪ್ರಾಧ್ಯಾಪಕರಾಗಿದ್ದು ಈಗ ನೀವೃತ್ತರಾಗಿದ್ದಾರೆ. ಡಾ.ಮಯ್ಯರವರು ಬಹುಭಾಷಾ ವಿಶಾರದರು. ಹಿಂದಿ, ಸಂಸ್ಕೃತ, ಪಾಲಿ, ಕನ್ನಡ, ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಅವರದು ಆಳವಾದ ಪಾಂಡಿತ್ಯ. ಜೈನಧರ್ಮದಿಂದ ಮಾರ್ಕ್ಸ್ ವಾದದವರೆಗೂ ಅವರ ಆಸಕ್ತಿ ಹರಡಿದೆ. ಸತತವಾದ ಓದು. ಚಿಂತನೆ, ಪರಿಶ್ರಮಗಳಿಂದ ಹಲವಾರು ವಿಶ್ವವಿದ್ಯಾಲಯಗಳಿಂದ ಎಂ.ಎ.ಪದವಿಗಳನ್ನೂ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿಯನ್ನೂ ಗಳಿಸಿದ್ದಾರೆ. ಅನೇಕಾನೇಕ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಒಂಟಿತನ, ಪರಕೀಯಪ್ರಜ್ಞೆ ...

READ MORE

Related Books