ಯು.ಆರ್. ಅನಂತಮೂರ್ತಿ

Author : ಬಸವರಾಜ ಸಬರದ

Pages 50

₹ 15.00




Year of Publication: 1996
Published by: ಪ್ರಸಾರಾಂಗ
Address: ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ

Synopsys

‘ಯು.ಆರ್. ಅನಂತಮೂರ್ತಿ’ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಜ್ಞಾನಪೀಠ ಪ್ರಶಸ್ತಿ ವಿಜೇತರು ಸರಣಿಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಲೇಖಕ ಬಸವರಾಜ ಸಬರದ ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ 1955ರಿಂದ 1995 ರವರೆಗೆ ನಲವತ್ತು ವರ್ಷಗಳ ಅವಧಿಯಲ್ಲಿ ಡಾ.ಯು. ಆರ್. ಅನಂತಮೂರ್ತಿಯವರು ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಈ ಚಿಕ್ಕ ಪುಸ್ತಿಕೆಯಲ್ಲಿ ಅವರ ಕಾದಂಬರಿಗಳನ್ನು ತೌಲನಿಕ ವಿವೇಚನೆಗೊಳಪಡಿಸಿ ವಿಮರ್ಶಿಸಲಾಗಿದೆ. ಅವರ ಉಳಿದ ಕೃತಿಗಳ ಪರಿಚಯ ಸಮೀಕ್ಷೆ ಮಾತ್ರ ಇಲ್ಲಿ ಸಾಧ್ಯವಾಗಿದೆ ಎಂದಿದ್ದಾರೆ ಬಸವರಾಜ ಸಬರದ. ಈ ಕೃತಿಯಲ್ಲಿ ಮೊದಲಿಗೆ ವ್ಯಕ್ತಿ-ಜಿವನ ಮಾಹಿತಿ ಇದ್ದರೆ ಆನಂತರದಲ್ಲಿ ಕೃತಿಗಳ ಕುರಿತ ಮಾಹಿತಿಗಳಿವೆ. ಕಾದಂಬರಿಗಳ ತೌಲನಿಕ ವಿವೇಚನೆ, ಸಣ್ಣ ಕಥೆಗಳು, ಕಾವ್ಯ, ನಾಟಕ, ವಿಮರ್ಶೆ ಕುರಿತ ವಿಶ್ಲೇಷಣೆಗಳೊಂದಿಗೆ ಸಮಾರೋಪ, ಹಾಗೂ ಅನುಬಂಧ ಸಂಕಲನಗೊಂಡಿವೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books