ಜೆ.ಆರ್.ಡಿ.ಟಾಟಾ

Author : ಮ.ಸು. ಮನ್ನಾರ್ ಕೃಷ್ಣರಾವ್

Pages 392

₹ 392.00




Year of Publication: 2017
Published by: ವಿದ್ಯಾಶ್ರೀ ಪ್ರಕಾಶನ
Address: ವಿದ್ಯಾಶ್ರೀ ಪ್ರಕಾಶನ, ರಾಜಾಜಿನಗರ, ಬೆಂಗಳೂರು

Synopsys

ಜೀವನ ಚರಿತ್ರೆ ಅಥವಾ ಆತ್ಮಕಥೆಗಳು ಜನರಿಗೆ ಸ್ಫೂರ್ತಿಯನ್ನು ನೀಡುತ್ತದೆ.ಇತ್ತೀಚೆಗೆ ಕನ್ನಡದಲ್ಲೂ ಆತ್ಮಕಥೆ ಅಥವಾ ಜೀವನ ಚರಿತ್ರೆಗಳು ಹೆಚ್ಚುಹೆಚ್ಚಾಗಿ ಬರುತ್ತಿವೆ.ನಿವೃತ್ತ ಶಿಕ್ಷಕ ಮ.ಸು.ಮನ್ನಾರ್ ಕೃಷ್ಣ ರಾವ್ ಅವರ 'ಅನನ್ಯ ಭಾರತೀಯ ಜೆ.ಆರ್.ಡಿ.ಟಾಟಾ' ಕೃತಿ ಇತ್ತೀಚೆಗೆ ಬಿಡುಗಡೆಯಾಗಿದ್ದು ಆಸಕ್ತಿದಾಯಕವಾಗಿದೆ. ಏರ್ ಇಂಡಿಯಾದಲ್ಲಿ ಕೇಂದ್ರ ಹಣಕಾಸು ಕಾರ್ಯದರ್ಶಿ ಎಲ್.ಕೆ.ಜಾ ಜತೆ ಟಾಟಾ ಪ್ರಯಾಣ ಮಾಡುತ್ತಿದ್ದರು. ಮಧ್ಯದಲ್ಲಿ ಎದ್ದು ಹೋಗಿದ್ದ ಅವರು ಒಂದು ಗಂಟೆಯ ನಂತರ ಮರಳುತ್ತಾರೆ. 'ಇಷ್ಟೊತ್ತು ಎಲ್ಲಿ ಹೋಗಿದ್ದಿರಿ?' ಎನ್ನುವ ಪ್ರಶ್ನೆಗೆ ಶೌಚಾಲಯಗಳು ಸ್ವಚ್ಚವಾಗಿವೆಯೇ ಎಂದು ಪರೀಕ್ಷಿಸಲು ಹೋಗಿದ್ದೆ' ಎನ್ನುತ್ತಾರೆ. ಅದು ಸರಿ, ಇಷ್ಟು ಹೊತ್ತು ಏಕಾಯಿತು?' ಎಂದು ಜಾ ಕೇಳಿದರೆ, 'ಟಾಯ್ ಲೆಟ್ ರೋಲ್‌ಗಳನ್ನು ಸರಿಯಾಗಿ ಜೋಡಿಸಿರಲಿಲ್ಲ, ಅವನ್ನು ಸರಿಪಡಿಸಿ ಬರಲು ತಡವಾಯಿತು' ಎನ್ನುತ್ತಾರೆ. ಲಾಭಕ್ಕಾಗಿ ಅನ್ಯಾಯದ ಮಾರ್ಗ ಹಿಡಿಯವ ಪ್ರಸಕ್ತ ಪರಿಸ್ಥಿತಿಯಲ್ಲಿ ಜೆ.ಆರ್.ಡಿ.ಟಾಟಾ ಅವರ ನಿಲುವು ಮಾದರಿಯೋಗ್ಯವಾಗಿದೆ.

About the Author

ಮ.ಸು. ಮನ್ನಾರ್ ಕೃಷ್ಣರಾವ್

ಮ.ಸು. ಮನ್ನಾರ್ ಕೃಷ್ಣರಾವ್ ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯ  ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ 12 ಕವನ ಸಂಕಲನಗಳು, 8 ಸತ್ಯ ಘಟನೆಗಳ ಗದ್ಯ ಕೃತಿಗಳು ಮತ್ತು ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books