ಕೃಷ್ಣಮೂರ್ತಿ ಆತ್ಮಸಂಗಾತ

Author : ಜಿಡ್ಡು ಕೃಷ್ಣಮೂರ್ತಿ

Pages 136

₹ 130.00




Year of Publication: 2022
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

ಇದೊಂದು ಅನನ್ಯ ಗ್ರಂಥ, ಏಕೆಂದರೆ ಕೃಷ್ಣಮೂರ್ತಿಯವರು ಏಕಾಂತದಲ್ಲಿದ್ದಾಗ ಅವರಾಡಿದ ಮಾತುಗಳನ್ನು ಧ್ವನಿಮುದ್ರಿಸಿಕೊಂಡು ಬಳಿಕ ಲಿಪಿ ರೂಪಕ್ಕೆ ಇಳಿಸಿದ ಅವರ ಏಕೈಕ ಕೃತಿ. 1982ರಲ್ಲಿ ಪ್ರಕಟವಾದ 'ಕೃಷ್ಣಮೂರ್ತೀಸ್ ಜರ್ನಲ್‌'ನ ಯಶಸ್ಸಿನ ಬಳಿಕ ಅವರು ತಮ್ಮ 'ಭಾವ ದಿನಚರಿ' (Journal) ಮುಂದುವರಿಸಿಕೊಂಡು ಹೋಗಬೇಕೆಂದು ಆಗ್ರಹಿಸಲಾಯಿತು. ಆದರೆ, ಆ ಹೊತ್ತಿಗಾಗಲೇ ಅವರ ಕೈ ನಡುಗುತ್ತಿತ್ತು. ಎಂಬತ್ತೇಳರ ಪ್ರಾಯ; ಆಯಾಸಕರವಾದ ಬರವಣಿಗೆಗೆ ಬದಲಾಗಿ, ತನ್ನ ಮನದ ಮಾತುಗಳನ್ನು ಅವರು ತನಗೇ ಎಂಬಂತೆ ಉಕ್ತಲೇಖನ ಮಾಡಬೇಕು ಎಂಬ ಸೂಚನೆ ಕೊಡಲಾಯಿತು. ಈ ಸಲಹೆ ಅವರಿಗೆ ಇಷ್ಟವಾಯಿತು. ಆದರೆ ಆಗ ಭಾರತಕ್ಕೆ ಬಂದು ಇಲ್ಲಿನ ಕೆಲಸ ಕಾರಗಳಲ್ಲಿ ತೊಡಗಿಕೊಳ್ಳಬೇಕಾದುದರಿಂದ ಈ ಸಲಹೆಯನ್ನು ಕೂಡಲೆ ಅನುಷ್ಠಾನಿಸಲು ಸಾಧ್ಯವಾಗಲಿಲ್ಲ. ಫೆಬ್ರವರಿ ತಿಂಗಳಿನಲ್ಲಿ ಕ್ಯಾಲಿಫೋರ್ನಿಯಕ್ಕೆ ಮರಳಿಬಂದ ಮೇಲೆ, ಈ ಸಂಪುಟದ ಮೊದಲ ವಾಕ್ ಖಂಡವನ್ನು ಹೊಸ ಸೋನಿ ಧ್ವನಿಮುದ್ರಕದ ಮುಂದೆ ಹೇಳಿದರು. ಲಾಸ್ ಏಂಜಲೀಸ್‌ನಿಂದ ಎಂಬತ್ತು ಮೈಲಿ ಉತ್ತರದಲ್ಲಿರುವ ಓಹೈ ಕಣಿವೆಯ ತಮ್ಮ ನಿವಾಸ ಪೈನ್ ಕುಟೀರದಲ್ಲೇ ಅವರ ಎಲ್ಲ ಉಕ್ತಲೇಖನಗಳು ಧ್ವನಿಮುದ್ರಿತವಾಗಿವೆ ಎಂದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.

About the Author

ಜಿಡ್ಡು ಕೃಷ್ಣಮೂರ್ತಿ
(11 May 1895)

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿದ ನಂತರ ಮುಂದೆ ಏಕಾಂಗಿಯಾಗಿ ನಡೆದರು. ತಮ್ಮ ...

READ MORE

Related Books