ಜನಪರ ಕವಿ ಯೋಗಿ ವೇಮನ

Author : ಸಿ.ಎಂ.ಗೋವಿಂದರೆಡ್ಡಿ

Pages 188

₹ 140.00




Year of Publication: 2018
Published by: ವಿಕಸನ ಪ್ರಕಾಶನ
Address: ವಿಕಸನ, ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ.ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ-೫೭೧೪೪೮
Phone: 9448268368

Synopsys

ಯೋಗಿ ವೇಮನ ಕನ್ನಡದ ಸರ್ವಜ್ಞನಂತೆ, ತಮಿಳಿನ ತಿರುವಳ್ಳುವರ್‌ನಂತೆ ತೆಲುಗಿನಲ್ಲಿ ಯೋಗಿ ವೇಮನ. ವೀರಬ್ರಹ್ಮಯ್ಯ, ಕೈವಾರ ನಾರಾಯಣಪ್ಪ, ಶಿಶುನಾಳ ಷರೀಫ ಮುಂತಾದ ದಾರ್ಶನಿಕ ಸಂತರಂತೆ ವೇಮನನೂ ದಾರ್ಶನಿಕ ಸಂತ ಮತ್ತು ಜನಪರ ಕವಿ. ವೇಮನ, ಸಮಾಜ ಜೀವನದ ಉತ್ಕಟ ರಾಗ ರಸಗಳನ್ನು, ನೋವು, ನಿಟ್ಟುಸಿರುಗಳನ್ನು ಅನುಭವಿಸಿ ಅವಧೂತನಾದವನು. ಆಂಧ್ರಪ್ರದೇಶದ ಕೊಂಡವೀಡು ಪ್ರಾಂತ್ಯವನ್ನು ಆಳಿದ ರೆಡ್ಡಿ ಜನಾಂಗದ ಮೂಲಪುರುಷ ದೊಂತುಅಲಿಯರೆಡ್ಡಿ. ಇವನಿಗೆ ಮೂರು ಮಂದಿ ಗಂಡುಮಕ್ಕಳು. ಅವರಲ್ಲಿ ಮೊದಲನೆಯವನು ಪುಲ್ಲಯವೇಮಾರೆಡ್ಡಿ, ಎರಡನೆಯವನು ಅನುಪೋತವೇಮಾರೆಡ್ಡಿ, ಮೂರನೆಯವನು ಅನುವೇಮಾರೆಡ್ಡಿ. ಕಾಲಾಂತರದಲ್ಲಿ ಈ ಅನುವೇಮಾರಡ್ಡಿಗೆ ಒಬ್ಬ ಮಗನಾದ. ಅವನೇ ಕೊಮರಗಿರಿವೇಮಾರೆಡ್ಡಿ ಎಂದು. ಈ ಕೊಮರುಗಿರಿವೇಮಾರೆಡ್ಡಿಗೂ ಅಲಿಯರೆಡ್ಡಿಗಾದಂತೆ ಮೂರು ಜನ ಗಂಡು ಮಕ್ಕಳಾದರು. ಅವರಲ್ಲಿ ಮೊದಲನೆಯವನು ಕೋಮಟಿವೆಂಕಾರೆಡ್ಡಿ, ಎರಡನೆಯವನು ರಾಚವೇಮಾರೆಡ್ಡಿ, ಮೂರನೆಯವನು ವೇಮಾರೆಡ್ಡಿ. ಈ ವೇಮಾರೆಡ್ಡಿಯೇ ಈ ಕೃತಿಯ ಕಥಾನಾಯಕ ವೇಮನ. ದುರದೃಷ್ಟವಂತನಾದ ವೇಮನ ಚಿಕ್ಕಂದಿನಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡ. ಏನೂ ಅರಿಯದ ಆ ಎಳೆಯ ವಯಸ್ಸಿನಲ್ಲಿ ಅವನಿಗೆ ಆಶ್ರಯವಾಗಿದ್ದು ಅವನ ಹಿರಿಯ ಅತ್ತಿಗೆ ನರಸಾಂಬೆ. ಅವಳು ವೇಮನನನ್ನು ತನ್ನ ಸ್ವಂತ ಮಗನಂತೆಯೇ ಸಾಕಿ ಸಲುಹಿ ತಾಯಿಯಿಲ್ಲದ ಕೊರಗನ್ನು ನೀಗಿಸಿದಳು (ಕೃತಿಯ ಭಾಗ)

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Related Books