ಸಾಥ್ವಿಕ ಶಿಲ್ಪಿ ನಾಗೇಂದ್ರ ಸ್ಥಪತಿ

Author : ಎಲ್. ಶಿವಲಿಂಗಪ್ಪ

Pages 55

₹ 15.00




Year of Publication: 1999
Published by: ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Address: ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಮೇಲ್ಮನೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು -560002

Synopsys

ಕರ್ನಾಟಕ ಶಿಲ್ಪಕಲೆಗೆ ವಿಶ್ವದಲ್ಲೇ ಹೆಸರು ಪಡೆದಿದೆ. ಶಿಲ್ಪಕಲೆಯ ತವರೂರು ಎಂದೇ ಕರೆಯಲ್ಪಡುತ್ತದೆ. ಇಂತಹ ಶಿಲ್ಪಕಲೆಗಾಗಿ ಸಾವಿರಾರು ಕಲಾವಿದರು ಶ್ರಮಿಸಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ, ಸಾಂಪ್ರದಾಯಿಕ ಶಿಲ್ಪಕಲೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ , ಕರ್ನಾಟಕ ಶಿಲ್ಪಕಲಾ ಅಕಾಡೆಮಿ ನಿರ್ಧರಿಸಿತ್ತು. ಈ ಯೋಜನೆಯ ಸಲುವಾಗಿ ‘ಶಿಲ್ಪ ಕಲಾವಿದರ ಮಾಲೆ’ ಹೆಸರಿನಲ್ಲಿ ಕಲಾವಿದರ, ಅವರ ಕೃತಿಗಳ ಕುರಿತಾದ ಪುಸ್ತಕಗಳನ್ನು ಪ್ರಕಟಿಸಿತು. ಈ ಯೋಜನೆಯ ಭಾಗವಾಗಿ ರಚನೆಯಾದ ಕೃತಿ ‘ಸಾಥ್ವಿಕ ಶಿಲ್ಪಿ ನಾಗೇಂದ್ರ ಸ್ಥಪತಿ’.

ನಾಡಿನ ಹೆಸರಾಂತ ಶಿಲ್ಪಿಗಳಾದ ಶ್ರೀನಾಗೇಂದ್ರ ಸ್ಥಪತಿಯರ ಶಿಲ್ಪಕಲೆಯ ಕುರಿತಾದ ಈ ಪುಸ್ತಕವನ್ನು  ಶ್ರೀ.ಎಲ್.ಶಿವಲಿಂಗಪ್ಪ ಬರೆದಿದ್ದಾರೆ. ಸ್ಥಪತಿಯವರ ಶಿಷ್ಯರಾಗಿ, ಹತ್ತಿರದಿಂದ ಅವರನ್ನು ಅರಿತಿದ್ದ ಶಿವಲಿಂಗಪ್ಪ, ನಾಗೇಂದ್ರ ಸ್ಥಪತಿಯವರ ಬಗ್ಗೆ ಜೀವನ ಮತ್ತು ಅವರ ಕಲಾಕೃತಿಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. 

About the Author

ಎಲ್. ಶಿವಲಿಂಗಪ್ಪ

ಮೈಸೂರಿನಲ್ಲಿ 1947ರಲ್ಲಿ ಜನಿಸಿದ ಎಲ್. ಶಿವಲಿಂಗಪ್ಪ ಅವರು ಮೈಸೂರು ಅರಮನೆಯ ಖ್ಯಾತ ಕಲಾವಿದ, ಶಿಲ್ಪ ಸಿದ್ದಾಂತಿ ಸಿದ್ದಲಿಂಗಸ್ವಾಮಿ ಅವರಿಂದಲೇ ಪ್ರಾಥಮಿಕ ಹಂತದ ಚಿತ್ರಕಲಾಭ್ಯಾಸ ಮಾಡಿದವರು. 1966ರಲ್ಲಿ ಬೆಂಗಳೂರಿಗೆ ಬಂದ ನಂತರ ಎಂ.ಟಿ.ವಿ. ಆಚಾರ್ಯರ ಕಲಾಶಾಲೆಯಲ್ಲಿ ಕ್ರಮಬದ್ಧ ಶಿಕ್ಷಣ ಹಾಗೂ ಪದವಿ ಪಡೆದರು. ಚಿತ್ರ-ಶಿಲ್ಪ ಎರಡೂ ಕ್ಷೇತ್ರಗಳಲ್ಲಿ ಹಲವಾರು ಪ್ರಯೋಗ ಮಾಡಿರುವ ಶ್ರೀಯುತರು ನಾಲ್ಕು ಏಕವ್ಯಕ್ತಿ ಪ್ರದರ್ಶನಗಳಲ್ಲದೆ ಹಲವಾರು ಗುಂಪು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 1997 - 2000 ರಲ್ಲಿ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದು, ಮರಳಚ್ಚಿನಲ್ಲಿ (Sand cast) ಹಾಗೂ ಥರ್ಮೊಕೋಲ್‌ಗಳಲ್ಲಿ ಶಿಲ್ಪ ರಚಿಸುವ ಬಗ್ಗೆ ಹಲವಾರು ಯಶಸ್ವಿ ಪ್ರಯೋಗಗಳನ್ನು ಮಾಡಿದ್ದಾರೆ. ...

READ MORE

Related Books