ಶ್ರೀನಿವಾಸ ಹಾವನೂರು ಅವರ ರಚಿಸಿರುವ ಕೃತಿ ‘ಕರ್ತವ್ಯಾನಂದ ಶ್ರೀ ರಾಜಪುರೋಹಿತರು’. ಶ್ರೀರಾಜಪುರೋಹಿತರ ಜೀವನ ಚರಿತ್ರೆ ಮತ್ತು ಕಾರ್ಯಸಾಧನೆಯ ಮೇಲೆ ಬೆಳಕು ಚೆಲ್ಲುವ ಕೃತಿ. ಇಲ್ಲಿ ಪ್ರಸ್ತಾವನೆ, ಜೀವನ, ಸಂಶೋಧನಾ ಕಾರ್ಯ, ವ್ಯಕ್ತಿ, ಫಲ ಶ್ರುತಿ, ಅನುಬಂಧಗಳಲ್ಲಿ 1) ದಿನಚರಿಯ ಕೆಲವು ಪುಟಗಳು, 2) ರಾಜಪುರೋಹಿತ ಲೇಖನ ಸೂಚಿ ಹಾಗೇ ಶ್ರದ್ಧಾಂಜಲಿ ಎಂಬ ಭಾಗಗಳಲ್ಲಿ ಕರ್ತವ್ಯಾನಂದ ಶ್ರೀ ರಾಜಪುರೋಹಿತರ ಜೀವನ ಸಾಧನೆಗಳನ್ನು ವಿವರಿಸಲಾಗಿದೆ.
ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...
READ MORE