‘ಪತ್ರಕರ್ತರ ಆಚಾರ್ಯ ಪಾ.ವೆಂ.ಆಚಾರ್ಯ’ ಜೀವನ- ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಈ ಕೃತಿಯನ್ನು ಡಾ. ಶ್ರೀನಿವಾಸ ಹಾವನೂರು ರಚಿಸಿದ್ದಾರೆ. ಪಾವೆಂ. ಅವರು ಪದಗಳ ಬೆನ್ನುಹತ್ತಿ ಅವುಗಳ ರೂಪ-ಸ್ವರೂಪಗಳನ್ನು ಪರಿಚಯಿಸುತ್ತ ಪದಲೋಕದ ಮುಕ್ತ ಸಂಚಾರಿಯಾಗಿ ಸಾಗುತ್ತಾರೆ. ಯಾವುದೇ ಪದದ ವಿವೇಚನೆ ನಡೆಸುವಾಗ ಪಾವೆಂ ಅದರ ಮೈಯನ್ನು ಸುತ್ತುಮುತ್ತು ತಿರುಗಿಸಿ, ಹೊರಳಿಸಿ, ಅದರ ರೂಪ, ಲಕ್ಷಣ, ಅರ್ಥ, ಮೌಲ್ಯಗಳನ್ನು ಪರಿಶೀಲಿಸುತ್ತಾರೆ. ಶಬ್ದದ ಮೂಲ ರೂಪವನ್ನು ಶೋಧ ಮಾಡುತ್ತಾರೆ. ಹೀಗೆ ಪದದ ಮೂಲಕ್ಕೆ ಇಕ್ಕುವ ಅರ್ಥಗ್ರಹಿಕೆ ಪಾವೆಂ. ಅವರ ಹಿರಿಯ ಸಾಧನೆಯಾಗಿದೆ ಎಂದಿದ್ದಾರೆ ಶ್ಯಾಮಸುಂದರ ಬಿದರಕುಂದಿ.
ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...
READ MORE