ದಣಿವಿಲ್ಲದ ಹೋರಾಟಗಾರ-ಎಚ್. ಎಸ್. ದೊರೆಸ್ವಾಮಿ

Author : ಕೆ. ಎಸ್. ನಾಗರಾಜ್

Pages 120

₹ 100.00




Published by: ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ

Synopsys

ದೊರೆಸ್ವಾಮಿ ಅವರು ಯಾವುದೇ ಯುವ ಜೀವಗಳನ್ನು ನಾಚಿಸುವಂತೆ, ಬೇರೆ ಬೇರೆ ಸಾಮಾಜಿಕ ಚಳವಳಿಗಳಲ್ಲಿ ಇನ್ನೂ ತೊಡಗಿಸಿಕೊಂಡಿದ್ದಾರೆ . ಸ್ವಾತಂತ್ರ ಹೋರಾಟದಲ್ಲಿ ಪಾಲುಗೊಂಡಿರುವ ಈ ಜೀವದ ಪಾಲಿಗೆ ನಾಡಿನ ಸ್ವಾತಂತ್ರ ಇನ್ನೂ ಪೂರ್ಣಗೊಂಡಿಲ್ಲ. ಆ ಕಾರಣಕ್ಕಾಗಿ ಭೂಮಿಗಾಗಿ, ಆದಿವಾಸಿಗಳಿಗಾಗಿ ಸದಾ ಮಿಡಿಯುತ್ತಾ, ಎಲ್ಲ ಹೋರಾಟಗಳಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಹೋರಾಟ, ಬದುಕಿನ ಕುರಿತಂತೆ ಕೆ. ಎಸ್. ನಾಗರಾಜ್ ಅವರು 'ದಣಿವಿಲ್ಲದ ಹೋರಾಟಗಾರ-ಎಚ್. ಎಸ್. ದೊರೆಸ್ವಾಮಿ' ಕೃತಿಯನ್ನು ಬರೆದಿದ್ದಾರೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಜೈಲುವಾಸವನ್ನು ಇವರು ಅನುಭವಿಸಿದ್ದ ದೊರೆಸ್ವಾಮಿ 1942ರ ಕ್ವಿಟ್ ಇಂಡಿಯಾ ಚಳವಳಿಯಿಂದ ಆರಂಭಿಸಿದ ಹೋರಾಟಕ್ಕೆ ಇನ್ನೂ ವಿಶ್ರಾಂತಿ ಸಿಕ್ಕಿಲ್ಲ ಎನ್ನುವುದನ್ನು ಈ ಕೃತಿ ಸರಳವಾಗಿ ಸಂಕ್ಷಿಪ್ತವಾಗಿ ಹೇಳುತ್ತದೆ. ವಿನೋಬಾ ಭಾವೆಯವರ ಭೂ ದಾನ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ, ಕನ್ನಡ ಮಾತೃಭಾಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ನಡೆದ ವಿವಿಧ ಚಳವಳಿಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಆದುದರಿಂದಲೇ, ದೊರೆಸ್ವಾಮಿಯ ಹೋರಾಟವನ್ನು ಸ್ವಾತಂತ್ರ ಪೂರ್ವ ಮತ್ತು ಆನಂತರ ಎಂದು ಗುರುತಿಸಬಹುದು.

Related Books