ಗುರುಬಸವಯ್ಯ ಅಮ್ಮಾಪುರ

Author : ಚಂದ್ರಕಾಂತ ಕರದಳ್ಳಿ

Pages 60

₹ 30.00




Year of Publication: 2010
Published by: ಬಸವ ಪ್ರಕಾಶನ
Address: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು ಮುಖ್ಯಬೀದಿ, ಗುಲಬರ್ಗ
Phone: 08472-222431 94498 25491

Synopsys

ಉತ್ತರ ಕರ್ನಾಟಕದ ವಿಚಾರವಾದಿ, ಲೇಖಕ ಗುರುಬಸವಯ್ಯ ಅಮ್ಮಾಪುರ ಅವರ ಕುರಿತು ಬರೆದ ಪುಟ್ಟ ಪುಸ್ತಕ ಇದು. ಅಮ್ಮಾಪುರ ಅವರ ಬಾಲ್ಯ, ಓದು, ಬದುಕು, ಸಾಹಿತ್ಯ, ಶಿಕ್ಷಕ ವೃತ್ತಿ, ಗೆಳೆಯರ ಒಡನಾಟ ಸಮಾಜದ ಬಡಿದಾಟ ಮುಂತಾದವುಗಳನ್ನು ಕೃತಿ ಒಳಗೊಂಡಿದೆ. ಮನೋಜ್ಞ ನಿರೂಪಣೆಯ ಕಾರಣಕ್ಕೆ ಲೇಖಕರ ಕೆಲಸ ಗಮನ ಸೆಳೆಯುತ್ತದೆ. 

About the Author

ಚಂದ್ರಕಾಂತ ಕರದಳ್ಳಿ
(25 August 1952)

ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ‌ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.  ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...

READ MORE

Related Books