
ಕೇತ್ಕರ್ ವಹಿನಿ ಶೀರ್ಷಿಕೆಯಡಿ ಲೇಖಕಿ ಉಮಾ ಕುಲಕರ್ಣಿ ಅವರು ಮರಾಠಿಯಲ್ಲಿ ಬರೆದ ಕಾದಂಬರಿಯನ್ನು ಲೇಖಕ ವಿರೂಪಾಕ್ಷ ಕುಲಕರ್ಣಿ ಅವರು ಧೀರೆ (ಕೇತ್ಕರ್ ವಹಿನಿ) ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮದುವೆ ನಂತರ ನಗರ ಪ್ರದೇಶದಿಂದ ದೂರದ ಹಳ್ಳಿಗೆ ಹೋಗುವ ಬಾಲಿಕೆಯ ಕಥೆ ಇದು. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಆಗುವ ಎಲ್ಲ ರೀತಿಯ ಅನ್ಯಾಯದ ವಿರುದ್ಧ ಈಕೆ ಹೋರಾಟ ಮಾಡುತ್ತಾಳೆ. ಈ ಮಧ್ಯೆ, ಆಕೆಯ ಪತಿ ಹತ್ಯೆಗೆ ಈಡಾಗುತ್ತಾನೆ. ಕಾನೂನು ಹೋರಾಟವೂ ಮಾಡುತ್ತಾಳೆ. ಹೆಣ್ಣಿನ ಹೋರಾಟದ ಸ್ವರೂಪ, ಹೆಣ್ಣು ಮನಸ್ಸು ಮಾಡಿದರೆ ಅವಳ ಧೈರ್ಯ, ಪ್ರತಿಪಾದನೆ-ಸಮರ್ಥಿಸಿಕೊಳ್ಳುವ ವೈಖರಿ, ಸ್ವಾವಲಂಬಿ ಬದುಕಿನ ಸ್ಥೈರ್ಯ ದಂಗು ಬಡಿಸುತ್ತದೆ ಎನ್ನುವುದನ್ನು ಈ ಕಾದಂಬರಿ ಪುರುಷ ಸಮಾಜಕ್ಕೆ ಎಚ್ಚರಿಕೆ ನೀಡುತ್ತದೆ. ಹೆಣ್ಣುಮಕ್ಕಳು ತಮ್ಮ ಮೇಲಿನ ಶೋಷಣೆಯನ್ನು ಹೇಗೆ ಕೊನೆಗಾಣಿಸಬೇಕು ಎಂಬುದರ ಒಳನೋಟ ನೀಡುತ್ತದೆ.
©2025 Book Brahma Private Limited.