ಕರಿಮೆಣಸಿನ ಗಿಡ

Author : ಸೃಜನ್ (ಪಿ. ಶ್ರೀಕಾಂತ್)

Pages 192

₹ 200.00




Year of Publication: 2015
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

`ಕರಿಮೆಣಸಿನ ಗಿಡ’ ಕೃತಿಯು ವಿ. ಚಂದ್ರಶೇಖರ್ ರಾವ್ ಅವರ ಮೂಲ ಕೃತಿಯಾಗಿದ್ದು, ಕನ್ನಡಕ್ಕೆ ಸೃಜನ್ ಅವರು ಅನುವಾದಿಸಿದ್ದಾರೆ. ಕುಸುರಿ ಕಲೆಯಂತೆ ಅರಳುತ್ತ ನಿಂತಿರುವ ಈ ಕಾದಂಬರಿಯು, ನಿಧಾನವಾಗಿ ವಸ್ತುವಿನುದ್ದಕ್ಕೂ ಜೀವಂತವಾಗಿ ವ್ಯಾಪಿಸುತ್ತ, ದಲಿತ ಜನಾಂಗವೊಂದು (ಮಾದಿಗ) ಪ್ರಸ್ತುತ ಸಂದರ್ಭದಲ್ಲಿ ಎದುರಿಸುತ್ತಿರುವ ಹೊಸ ಸಮಸ್ಯೆ-ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ.

ಕಾಲಾಂತರದಲ್ಲಿ ಸ್ವಜಾತಿ ದಲಿತ ನಾಯಕರ ದುರಾಸೆಯ ದೆಸೆಯಿಂದಾಗಿ ದಲಿತ ಚಳುವಳಿಯ ಮೂಲ ಉದ್ದೇಶಗಳಲ್ಲುಂಟಾಗುತ್ತಿರುವ, ಮನುಷ್ಯ ಬದುಕಿಗೆ ವಿರುದ್ಧವಾದ ಪಲ್ಲಟಗಳನ್ನು ಕಾದಂಬರಿಯ ಮುಖ್ಯಪಾತ್ರ ರಾಜಯ್ಯನ ವಿಕ್ಷಿಪ್ತ ಬದುಕಿನ ಮೂಲಕ ಅನಾವರಣ ಮಾಡುತ್ತಲೇ ಈ ಹೊತ್ತು ಅಮಾಯಕ ದಲಿತ ಜನಾಂಗದ ಕಟ್ಟಕಡೆಯ ಮನುಷ್ಯ ನಿರ್ವಹಿಸುತ್ತಿರುವ ಅತಿ ಘೋರ ಬದುಕಿನ ಚಿತ್ರಣವನ್ನು ಕಣ್ಮುಂದೆ ತರುತ್ತದೆ.

About the Author

ಸೃಜನ್ (ಪಿ. ಶ್ರೀಕಾಂತ್)

ಸೃಜನ್ ಎಂದೇ ಹೆಸರಾದ ಪಿ. ಶ್ರೀಕಾಂತ್ ಹುಟ್ಟಿದ್ದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕಮಲಾಪುರಂನಲ್ಲಿ. ಓದಿದ್ದು ಕೊಪ್ಪಳ, ಸಂಡೂರು ಮತ್ತು ಬಳ್ಳಾರಿಯಲ್ಲಿ. ಬಿಇ ಸಿವಿಲ್ ಪದವೀಧರರಾದ ಸೃಜನ್ ಸುಮಾರು 15 ವರ್ಷಗಳ ಕಾಲ ಎಂಜಿನಿಯರ್ ಆಗಿ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಳೆತನದಿಂದಲೂ ಕಲೆ,ಸಿನಿಮಾ ಮತ್ತು ಸಾಹಿತ್ಯದ ಕುರಿತು ಒಲವು. 1988ರಿಂದಲೂ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿಸಿಕೊಂಡ ಇವರು, ಕಾಸರಗೋಡು,ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಇವರ ವ್ಯಂಗ್ಯಚಿತ್ರಗಳ ಪ್ರದರ್ಶನ ಕಂಡಿವೆ. ಮುಂಬೈನ ’ಜಿಂದಾಲ್ ಆರ್ಟ ಫೌಂಡೇಶನ್’ ನಡೆಸಿದ ಕಲಾಸ್ಪರ್ಧೆಯಲ್ಲಿ ’ ಅಪನಾ ಆರ್ಟಿಸ್ಟ್’ ಪುರಸ್ಕಾರಕ್ಕೆ ಭಾಜನರಾದ ಸೃಜನ್ ಅವರ 18 ಕಲಾಕೃತಿಗಳಿಗೆ ಶಾಶ್ವತ ಡಿಸ್‌ಪ್ಲೆ ...

READ MORE

Reviews

(ಹೊಸತು, ಜುಲೈ 2015, ಪುಸ್ತಕದ ಪರಿಚಯ)

'ಕರಿ ಮೆಣಸಿನ ಗಿಡ' ಸೃಜನ್ ಅನುವಾದಿಸಿರುವ ತೆಲುಗು (ಮೂಲ ಲೇಖಕರು : ಡಾ|| ವಿ. ಚಂದ್ರಶೇಖರರಾವ) ಕಾದಂಬರಿ, ಮೂಲತಃ ಕಲಾವಿದರಾಗಿರುವ ಸೃಜನ್ ಅವರ ಕೈಯಲ್ಲಿ ಈ ಕಾದಂಬರಿಯ ಅನುವಾದವು ಕುಸುರಿ ಕಲೆಯಂತೆ ಅರಳುತ್ತ, ನಿಧಾನವಾಗಿ ವಸ್ತುವಿನುದ್ದಕ್ಕೂ ಜೀವಂತವಾಗಿ ವ್ಯಾಪಿಸುತ್ತ, ದಲಿತ ಜನಾಂಗವೊಂದು (ಮಾದಿಗ) ಪ್ರಸ್ತುತ ಸಂದರ್ಭದಲ್ಲಿ ಎದುರಿಸುತ್ತಿರುವ ಹೊಸ ಸಮಸ್ಯೆ-ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ. ಕಾಲಾಂತರದಲ್ಲಿ ಸ್ವಜಾತಿ ದಲಿತ ನಾಯಕರ ದುರಾಸೆಯ ದೆಸೆಯಿಂದಾಗಿ ದಲಿತ ಚಳುವಳಿಯ ಮೂಲ ಉದ್ದೇಶಗಳಲ್ಲುಂಟಾಗುತ್ತಿರುವ, ಮನುಷ್ಯ ಬದುಕಿಗೆ ವಿರುದ್ಧವಾದ ಪಲ್ಲಟಗಳನ್ನು ಕಾದಂಬರಿಯ ಮುಖ್ಯಪಾತ್ರ ರಾಜಯ್ಯನ ವಿಕ್ಷಿಪ್ತ ಬದುಕಿನ ಮೂಲಕ ಅನಾವರಣ ಮಾಡುತ್ತಲೇ ಈ ಹೊತ್ತು ಅಮಾಯಕ ದಲಿತ ಜನಾಂಗದ ಕಟ್ಟಕಡೆಯ ಮನುಷ್ಯ ನಿರ್ವಹಿಸುತ್ತಿರುವ ಅತಿ ಘೋರ ಬದುಕಿನ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ಇಡಿಯಾಗಿ, ಕಾದಂಬರಿಯ ಆಶಯ, ಪ್ರಾರಂಭದಲ್ಲಿ ಬರುವ ಪಾರಿವಾಳಗಳ ಚಿತ್ರಣ ಮತ್ತು ಆ ಮೂಲಕ ಕಥಾನಾಯಕ ರಾಜಯ್ಯನ ಮಗ ರೂಮಿಯ, ತನ್ನ ಅಪ್ಪನಿಗೆ ವಿರುದ್ಧವಾದ ಮನೋಸ್ಥಿತಿಯು ದಲಿತರು ತಮ್ಮ ಹಕ್ಕಿಗಾಗಿ ತಮ್ಮವರೊಂದಿಗೇನೆ ಹೋರಾಡಬೇಕಾದ ಅನಿವಾರ್ಯತೆ ಈ ಹೊತ್ತಿನ ತುರ್ತು- ಎಂಬ ಅರ್ಥದಲ್ಲಿ ಧ್ವನಿಸುತ್ತದೆ.

Related Books