ಕಂಪನ ಮಾಪನಗಳೇ ವಂದನೆ

Author : ನಾ. ದಾಮೋದರ ಶೆಟ್ಟಿ

Pages 212

₹ 410.00




Year of Publication: 2018
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - 560018

Synopsys

‘ಕಂಪನ ಮಾಪನಗಳೇ ವಂದನೆ’ ಮಲಯಾಳಂ ಸಾಹಿತಿ ಸಿ.ರಾಧಾಕೃಷ್ಣನ್ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ಕಾದಂಬರಿ. ಈ ಕೃತಿಯನ್ನು ನಾ. ದಾಮೋದರ ಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ನಿದ್ರಿಸುತ್ತಿರುವವರನ್ನು ಸಮಸ್ಯೆಯ ಕಡೆಗೆ ತುಡಿಯುವಂತೆ ಮಾಡಲು, ಎಚ್ಚರಗೊಳ್ಳುವಂತೆ ನೋಡಿಕೊಳ್ಳಲು ಸಾಹಿತಿಯಾದವನು ಸಕಲ ತಂತ್ರಗಳನ್ನೂ ಬಳಸುತ್ತಿರುತ್ತಾನೆ. ನಿಗೂಢವಾದ ಯುಗದ ಸಮಸ್ಯೆಯ ಕುರಿತು ನಮ್ಮನ್ನು ವೈಜ್ಞಾನಿಕವಾಗಿ ಅಸ್ವಸ್ಥರನ್ನಾಗಿಸಲೂ ಎಚ್ಚರಿಸಲೂ ಕಲಾತ್ಮಕವಾಗಿ ಸಂತೃಪ್ತರನ್ನಾಗಿಸಲೂ ಕಾದಂಬರಿಕಾರನಿಗೆ ಸಾಧ್ಯವಾಗುವುದು ಹೇಗೆ ಎಂಬುದನ್ನು ಸಿ.ರಾಧಾಕೃಷ್ಣನ್ ತಮ್ಮ ಕಾದಂಬರಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಅವರ ಕೃತಿಯನ್ನು ಅನುವಾದಕ ನಾ. ದಾಮೋದರ ಶೆಟ್ಟಿ ಅವರು ಅಷ್ಟೇ ಸೂಕ್ಷ್ಮ ಪ್ರಜ್ಞೆಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ನಾ. ದಾಮೋದರ ಶೆಟ್ಟಿ
(02 August 1951)

ನಾದಾ ಎಂತಲೂ ಕರೆಯಲಾಗುವ ನಾ. ದಾಮೋದರ ಶೆಟ್ಟಿ ಅವರು 1951 ಆಗಸ್ಟ್‌ 2ರಂದು ಕಾಸರಗೋಡಿನ ಕುಂಬಳೆಯಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್‌, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಸಾಕ್ಷಾತ್ಕಾರ, ಮಹಾಕವಿ ಜಿ. ಶಂಕರ ಕುರುಪ್, ಭರತವಾಕ್ಯ (ಅನುವಾದ), ಅದ್ಭುತ ರಾಮಾಯಣ, ಸ್ವಾತಂತ್ರದ ಸ್ವರ್ಣಹೆಜ್ಜೆ, ಸಾನ್ನಿಧ್ಯ, ಪೋಲಿ, ...

READ MORE

Related Books