
ಕರ್ನಾಟಕದ ರಾಜ್ಯಪಾಲರಾಗಿದ್ದ ಡಾ.ವಿ.ಎಸ್.ರಮಾದೇವಿಯವರು ತೆಲುಗಿನಲ್ಲಿ ಬರೆದ ‘ಅನುಬಂಧಾಲು’ ಕೃತಿಯ ಅನುವಾದವಾಗಿದೆ ಈ ಕಾದಂಬರಿ. ಮಾರ್ಕಂಡಪುರಂ ಶ್ರೀನಿವಾಸ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಒಂದು ಕಾಲಘಟ್ಟದಲ್ಲಿ ದೇಶದಲ್ಲಿ ನಡೆದ ರಾಜಕೀಯ, ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ ಹಾಗು ಶೈಕ್ಷಣಿಕ ಸಂಘಟನೆಗಳ ಆಗುಹೋಗುಗಳ ಚಿತ್ರಣವನ್ನು ಇಲ್ಲಿ ನೀಡಲಾಗಿದೆ. ತೆಲಂಗಾಣದ ರಜಾಕಾರರ ಕಾಲಘಟ್ಟದ ವಿವರ, ಆಗಿನ ಹಿಂದೂ ಮುಸ್ಲಿಂ ಕುಟುಂಬಗಳ ನಡುವೆ ಇದ್ದ ಸ್ನೇಹ-ಸಂಬಂಧಗಳು, ಕುಟುಂಬಗಳ ಜೀತ ಪದ್ಧತಿಗಳು, ದೇಶ-ಭಾಷೆ, ಸಂಸ್ಕೃತಿ ವಿಚಾರಗಳು, ಆಗಿನ ಜಮೀನ್ದಾರಿ ಕುಟುಂಬಗಳ ಪರಿಸ್ಥಿತಿ, ಕೌಟುಂಬಿಕ ಸ್ಥಿತಿಗತಿಗಳು, ಕಾರ್ಮಿಕರ ಸಮಸ್ಯೆ, ಸ್ತ್ರೀಯರ ಬದುಕಿನ ಬವಣೆಗಳು ಮುಂತಾದ ಪ್ರಮುಖ ವಿಷಯಗಳ ಕುರಿತು ಲೇಖಕರು ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2025 Book Brahma Private Limited.