
ಗಳಗನಾಥರು ಬರೆದ ಕೃತಿ-ಕ್ಷಾತ್ರತೇಜ ಅಥವಾ ಸ್ವಾಮಿಭಕ್ತಿ ಪ್ರದರ್ಶನ. 1914ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿತ್ತು. ಮಹಾರಾಷ್ಟ್ರದ ಮ.ರಾ.ರಾ. ಹರಿ ನಾರಾಯಣ ಆಪಟೆ ಅವರು ಬರೆದ ‘ರೂಪನಗರಚಿ ರಾಜಕನ್ಯೆ’ ಎಂಬ ಕಾದಂಬರಿಯನ್ನು ಆಧರಿಸಿ ಬರೆಯಲಾಗಿದೆ ಎಂದು ಲೇಖಕರು ಹೇಳಿದ್ದಾರೆ. ಮೊಗಲ್ ಸಾಮ್ರಾಜ್ಯದ ಔರಂಗಜೇಬ ಹಾಗೂ ರಜಪೂತರ ಮಧ್ಯೆ ನಡೆದ ಯುದ್ಧಗಳ ವರ್ಣನೆ ಇದೆ. ರಜಪೂತರ ಕ್ಷಾತ್ರತೇಜಸ್ಸು ವರ್ಣಿತವಾದ್ದರಿಂದ ಕೃತಿಗೆ ಕ್ಷಾತ್ರತೇಜಸ್ಸು ಎಂತಲೂ ಅಲ್ಲಲ್ಲಿ ಸ್ವಾಮಿಭಕ್ತಿ ವ್ಯಕ್ತವಾಗುತ್ತಿದ್ದರಿಂದ ಸ್ವಾಮಿಭಕ್ತಿ ಪ್ರದರ್ಶನ ಎಂತಲೂ ಕೃತಿಗೆ ಶೀರ್ಷಿಕೆ ನೀಡಿರುವುದಾಗಿಯೂ ಲೇಖಕರು ತಿಳೀಸಿದ್ದಾರೆ.
ರೂಪನಗರದ ವಿಜಯಸಿಂಹನ ಸ್ವಾಭಿಮಾನ, ಸ್ವಕುಲಾಭಿಮಾನ, ಉದೇಪುರದ ರಾಜಸಿಂಹನ ವಿಚಾರಪೂರ್ವಕ ಕಾರ್ಯಪ್ರವೃತ್ತಿ, ರೂಪಮತಿಯ ಕುಲೀನತೆ, ಇಂದಿರೆ-ಪದ್ಮೆ-ದುರ್ಗಾದಾಸ ಇವರ ಸ್ವಾಮಿನಿಷ್ಠೆ, ಔರಂಗಜೇಬನ ವಿಷಯಾಸಕ್ತಿ, ಉದೇಪುರಿಯ ಪತಿನಿಷ್ಠೆ, ಚಂದ್ರಾವತಿಯ ತೇಜಸ್ವಿತೆ ಎಲ್ಲವನ್ನೂ ಸುಂದರವಾಗಿ ವರ್ಣಿಸಲಾಗಿದೆ. ಈ ಕಾದಂಬರಿಯು ರಾಜಸಗುಣ ಪ್ರಧಾನವಾಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.