ಮಧುರ ಆರಾಧನ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 186

₹ 90.00




Year of Publication: 2007
Published by: ಸುಧಾ ಎಂಟರ್‍ ಪ್ರೈಸಸ್
Address:  #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560104
Phone: 98454 49811

Synopsys

ಮಧುರ ಆರಾಧನ ಕಾದಂಬರಿಯೂ ಆಧುನಿಕತೆ ಎಂಬ ಮಾರಕ ರೋಗಕ್ಕೆ ಗುರಿಯಾದ ಮಾನವ ತಮ್ಮ ಕುಟುಂಬದವರಿಗೆ ಹೇಗೆ ಸಮಯ ಕೊಡಲು ಹಿಂಜರಿಯುತ್ತಾನೆ ಎಂಬೆಲ್ಲಾ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುತ್ತಾ ಮುಂದೆ ಸಾಗುತ್ತದೆ. ಸಮಾಜದಲ್ಲಿ ತನ್ನ ಸ್ಥಾನ, ಅಧಿಕಾರ ಹೆಚ್ಚಿಸಲು ಮನುಷ್ಯ ಮರ್ಯಾದೆ ಹೆಚ್ಚಿಸಲು ಮಾಡುವ ಪ್ರಯತ್ನ ಅದಕ್ಕೆ ಆತ ಅನುಭವಿಸುವ ದಾರಿ, ಈಗಿನ ಯಾಂತ್ರಿಕ ಬದುಕಿನಲ್ಲಿ ಮನುಷ್ಯ ತನ್ನ ಕುಟುಂಬಕ್ಕೆ, ಕೌಟುಂಬಿಕ ಮೌಲ್ಯಗಳಿಗೆ ಒತ್ತು ಕೊಟ್ಟಾಗ,ಅದರಿಂದ  ಉಂಟಾಗುವ ಸ್ವಂತ ಖುಷಿ ಇವೆಲ್ಲವನ್ನೂ ಈ ಕಾದಂಬರಿಯೂ ಚರ್ಚಿಸುತ್ತದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books