ಒಮರ್ಟಾ

Author : ರವಿ ಬೆಳಗೆರೆ

Pages 222

₹ 175.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಸದಾ ಭೂಗತ ಲೋಕದ ಜಗತ್ತಿನ ಕುರಿತು ಒಂದಲ್ಲಾ ಒಂದು ಅಚ್ಚರಿಯ ವಿಷಯಗಳನ್ನು ಅರುಹುವ ರವಿ ಬೆಳಗೆರೆಯವರು ಒಮರ್ಟಾ ಕೃತಿಯಲ್ಲಿ ಭೂಗತ ಜಗತ್ತಿನ ಮೌನದ ಕುರಿತು ಮಾತನಾಡುತ್ತಾರೆ. ಯಾವ ರೀತಿ ಮೌನ ಭೂಗತ ಜಗತ್ತಿನಲ್ಲಿ ಪ್ರಾಣ ಉಳಿಸುತ್ತೆ ಮತ್ತು ಗುಟ್ಟು ರಟ್ಟಾದರೆ ಪ್ರಾಣಕ್ಕೆ ಯಾವ ರೀತಿ ಅಪಾಯವಿದೆ ಎಂದು ವಿವರಿಸುವ ಕೃತಿ ಒಮರ್ಟಾ. ಪ್ರಳಯ ಸದೃಶ ಗುಟ್ಟುಗಳನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡು ತಮ್ಮ ಜೀವವನ್ನು ಉಳಿಸಿಕೊಂಡ ಹಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದಂತಹ ಕಾದಂಬರಿಯಿದು. ಸಮಾಜದಿಂದ ಕಡೆಗಣಿಸಲ್ಪಟ್ಟ ಭೂಗತ ಲೋಕದಲ್ಲಿ ನಂಬಿಕೆ ವಿಶ್ವಾಸಗಳು ಯಾವ ರೀತಿ ಭೂಗತ ಜೀವಿಗಳ ಪ್ರಾಣ ಉಳಿಸುತ್ತವೆ ಮತ್ತು ಅದೇ ನಂಬಿಕೆ ವಿಶ್ವಾಸವನ್ನು ಮೀರಿ ನಡೆದರೆ ಯಾವ ರೀತಿ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದರೆ ವಿವರಣೆ ಇಲ್ಲಿದೆ. ವಿನಾಕಾರಣ ಯಾವ ಹಂತದಲ್ಲಿಯೂ ಕಥೆಯನ್ನು ಎಳೆಯದೇ, ಮೊದಲಿನಿಂದಲೂ ಕೊನೆಯವರೆಗೆ ಓದುಗರನ್ನು ರೋಚಕತೆಯ ಉತ್ತುಂಗದಲ್ಲಿ ಇರಿಸುವಂತಹ ನಿರೂಪಣೆ ಈ ಪುಸ್ತಕದಲ್ಲಿದೆ. ಒಮರ್ಟಾ, ದ ಲಾ ಆಫ್ ಸೈಲೆನ್ಸ್ ಎಂಬ ತಲೆಬರಹದಡಿ ಪ್ರಕಟಗೊಂಡ ಈ ಪುಸ್ತಕ ಮೌನದ ಮಹತ್ವವನ್ನು ವಿವರಿಸುತ್ತದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books