ಕ್ಷಿತಿಜದೆಡೆಗೆ 

Author : ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)

Pages 236

₹ 160.00




Year of Publication: 2008
Published by: ಸಂಕಲ್ಪ ಪ್ರಕಾಶನ
Address: 1,1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ದೀಪಾಂಜಲಿ ನಗರ, ಬೆಂಗಳೂರು-560026
Phone: 080-23111088/9449800858

Synopsys

ಬೇಲಿ, ಕ್ಷಿತಿಜದೆಡೆಗೆ ಮತ್ತು ಪ್ರೀತಿ ಅರಳಿತು ಎಂಬ ಮೂರು ಕಾದಂಬರಿಗಳನ್ನು ಒಳಗೊಂಡಿರುವ ಪುಸ್ತಕ.
1991 ರಲ್ಲಿ ಬರೆದ ಬೇಲಿ ಕಾದಂಬರಿಯು 2003ರ ಸೆಪ್ಟೆಂಬರ್ ’ರಾಗ ಸಂಗಮ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. 1990ರಲ್ಲಿ ರಚಿಸಿದ ’ಕ್ಷಿತಿಜದೆಡೆಗೆ’ ಕಾದಂಬರಿಯು 2004ರ ಸೆಪ್ಟೆಂಬರ್ ’ನವರಾಗಸಂಗಮ’ ಮೊದಲು ಮುದ್ರಣ ಕಂಡಿತ್ತು. 1976 ರಲ್ಲಿ ಬರೆದ ಕಾದಂಬರಿ 'ಪ್ರೀತಿ ಅರಳಿತು' 2005ರ ಫೆಬ್ರುವರಿ ,ಮಾರ್ಚ್ ’ ರಾಗಸಂಗಮ’ ಪತ್ರಿಕೆಯಲ್ಲಿ ಮುದ್ರಣವಾಗಿತ್ತು. ಬೇಲಿ ಕಾದಂಬರಿಯು ಸಮಾಜ ಮತ್ತು ವ್ಯಕ್ತಿಗತವಾಗಿ ಬಿಗಿದುಕೊಳ್ಳುವ ಬೇಲಿ ಸಂಕೋಲೆಯ ತೆಳುವಾದ ಚಿತ್ರಣ ನೀಡುತ್ತದೆ. ಕ್ಷಿತಿಜದೆಡೆಗೆ ಕಾದಂಬರಿ ಸುಖವನ್ನು ಅರಸುತ್ತಾ ಮೂಲದ ಅರಿವಿನೊಂದಿಗೆ ಹೊರಳುವ ಸ್ತ್ರೀಯೋರ್ವಳ ತಾಕಲಾಟದ ಪರಿಯನ್ನು ತೆರೆದಿಡುತ್ತದೆ. ಪ್ರೀತಿ ಅರಳಿತು ಕಾದಂಬರಿಯು ಲೇಖಕರು ಕಾಲೇಜ್ ದಿನಗಳಲ್ಲಿ ಬರೆದ ಕಾದಂಬರಿ. ತಾಯಿ ಪ್ರೀತಿಯ ಕಲ್ಪನೆಯಲ್ಲಿ ಕನಸಿನ ಲೋಕದಲ್ಲಿ ವಿಹರಿಸುವ, ಕಾಮದ ಸ್ವರೂಪದ, ವಿದ್ಯಾರ್ಥಿ ಜೀವನದ ಮೆಟ್ಟಿಲುಗಳ ಪರಿಚಯ ನೀಡುತ್ತದೆ. 
 

About the Author

ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)
(01 June 1954)

’ಕ್ಷಿತಿಜ್ ಬೀದರ್‌’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ  ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ  (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...

READ MORE

Related Books