ಸಪ್ತಧಾರೆ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 246

₹ 144.00




Year of Publication: 2007
Published by: ಸುಧಾ ಎಂಟರ್‍ ಪ್ರೈಸಸ್
Address:  #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560103
Phone: 98454 49811

Synopsys

ಪ್ರೀತಿ, ಪ್ರೇಮ, ಯೌವನದ ಆಕರ್ಷಣೆಯಾದರೆ,ಈ ವಿವಾಹವೂ ವಿಚ್ಛೇದನದಲ್ಲಿ ಮುಕ್ತಾಯವಾಗುತ್ತದೆ. ನೈಜಪ್ರೇಮಿಗಳು  ಸಂಗಾತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗಿರುತ್ತಾರೆ.ಏನೇ ಕಷ್ಟವನ್ನು ಸಹಿಸಲು ತಯಾರಿರುತ್ತಾರೆ.ಅಂತಹದೇ ಪ್ರೇಮಕತೆ ಕಾದಂಬರಿ "ಸಪ್ತಧಾರೆ".ಶ್ರೀಮಂತ ಉದ್ಯಮಿ ರಾಮಲಿಂಗಂ ಮಗಳು ಅಂಜಲಿ ಮತ್ತು ಪ್ರೋಫೆಸರ್ ಅನಂತರಂಗಮೂರ್ತಿಯವರ ಮಗ ವಾಸು ಪರಸ್ಪರ ಯೌವನದ ಆಕರ್ಷಣೆಗೆ ಒಳಗಾಗುತ್ತಾರೆ.ಇವರ ಪ್ರೇಮದ ಸುಳಿವು ದೊರೆತ ರಾಮಲಿಂಗಂ ಮಗಳ ಮದುವೆಯ ನಿಶ್ಚಿತಾರ್ಥವನ್ನು ಅವಳ ಸೋದರಮಾವ ಚೆಲುವಯ್ಯನೊಡನೆ ಮಾಡುವ ತಯಾರಿ ನಡೆಸುತ್ತಾರೆ.ಅಂಜಲಿ ವಾಸುಗೆ ವಿಷಯ ತಿಳಿಸಿ, ಓಡಿ ಹೋಗಿ ಮದುವೆಯಾಗುವ ಒತ್ತಡ ಹೇರುತ್ತಾಳೆ‌.ಪ್ರೇಮಾಂಧನಾದ ವಾಸು ಅಕ್ಕನ ಬುದ್ಧಿಮಾತಿಗೂ ಕಿವಿಗೊಡದೆ ಮನೆ ಬಿಟ್ಟು ಹೋಗಿ ಮದುವೆಯಾಗುತ್ತಾನೆ.ವಾಸು ಸಂಪಾದಿಸುವ ಹಣ ಯಾವೂದಕ್ಕೂ ಸಾಲದೇ,ಕಾಸು ಕಾಸಿಗೂ ಪರದಾಡುವ ಸ್ಥಿತಿ ಬಂದಾಗ ಅಂಜಲಿಗೆ ತಂದೆಯ ಸಂಪತ್ತಿನ ನೆನಪಾಗುತ್ತದೆ.ಆಗಾಗ ಬಂದು ಭೇಟಿಯಾಗುವ ಅವಳ ತಾಯಿ ಮತ್ತು ಅಜ್ಜಿ, ಹಣದ ಸಹಾಯ ನೀಡಿದರೂ,ಹಣದ ಆಮೀಷಕ್ಕೆ ಬಲಿಯಾಗದೆ ತನ್ನ ದೊಡ್ಡತನ ಮೆರೆಯುವಲ್ಲಿ ವಾಸು ಯಶಸ್ವಿಯಾಗುತ್ತಾನೆ.ರಾಮಲಿಂಗಂ ಮಗಳಿಗೆ ದೊಡ್ಡ ಬಂಗಲೆ ಖರೀದಿಸಿ ಕೊಟ್ಟು "ವಾಸವನ್ನು ಅಲ್ಲಿಗೆ ಬದಲಾಯಿಸಿದರೆ, ನಿನ್ನ ಗಂಡ ನಿನ್ನ ಮೇಲಿನ ಪ್ರೀತಿಯಿಂದ ನಿನ್ನ ಹಿಂದೆ ಬರುತ್ತಾನೆ" ಎಂಬ ಉಪದೇಶ ಕೊಡುತ್ತಾರೆ.ಹಣದಾಹವಿಲ್ಲದ ವಾಸು ಪತ್ನಿಯ ಬಂಗಲೆಗೆ ಬರದೇ, ತಾನಿದ್ದ ಮನೆ ಖಾಲಿ ಮಾಡಿ ಪತ್ನಿಗೆ ಪತ್ರ ಬರೆದು ಊರು ಬಿಟ್ಟು ಹೋಗುತ್ತಾನೆ.ಮೂರು ತಿಂಗಳ ನಂತರ ಹಿಂತಿರುಗುವೇ, ಹೊಂದಾಣಿಕೆ ಸಾಧ್ಯವಾದರೆ ತನ್ನೊಡನೆ ಸಂಸಾರ ಮಾಡು,ಇಲ್ಲ ತಾನು ವಿಚ್ಛೇದನ ನೀಡುವೆ ಎಂದು ಪತ್ರದಲ್ಲಿ ಉಲ್ಲೇಖಿಸಿರುತ್ತಾನೆ.ತವರು ಮನೆಗೆ ಮರಳಿದ ಅಂಜಲಿಗೆ ತಾಯಿ, ತಂದೆ, ಅಜ್ಜಿ ಗಂಡನನ್ನು ಬಿಟ್ಟು ಬೇರೆ ಮದುವೆಯಾಗುವಂತೆ ಹೇಳುತ್ತಾರೆ.ಅಂಜಲಿ ತವರು ಮನೆಯವರ ಮಾತು ಕೇಳಿದಳೇ? ಗಂಡನಿಗೆ ವಿಚ್ಛೇದನ ನೀಡಿದಳೇ? ಪತಿಯ ಮೇಲಿನ ಪ್ರೀತಿಗಿಂತತಂದೆಯ ಸಂಪತ್ತಿನ ಮೇಲಿನ ಪ್ರೀತಿ ಹೆಚ್ಚಾಯಿತೇ? ತನ್ನ ಪ್ರೀತಿ ಯೌವನದ ಆಕರ್ಷಣೆಯಲ್ಲ ನೈಜ ಪ್ರೀತಿ ಎಂದು ಅಂಜಲಿ ಸಾಬೀತು ಪಡಿಸಿದಳೇ? ಹೀಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಮುಂದೆ ಸಾಗುವ ಕಾದಂಬರಿ ಅವೆಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುತ್ತದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books