
ಎರಡು ಕಾದಂಬರಿಗಳನ್ನು ಒಳಗೊಂಡ ಪುಸ್ತಕ. ಕಬ್ಬಿನ ಬನದಲ್ಲಿ ಕಾದಂಬರಿಯೊಂದಿಗೆ ’ಪ್ರೀತಿಸಿದವನು ನೀನೊಬ್ಬನೇ ಅಲ್ಲ’ ಎಂಬ ಇನ್ನೊಂದು ಕಾದಂಬರಿ ಸೇರಿಸಲಾಗಿದೆ. ಈರಪ್ಪ ಕಂಬಳಿ ಮುನ್ನುಡಿ ಬರೆದಿದ್ದಾರೆ. ಇದು ಅತ್ತಿಮಬ್ಬೆ ಪ್ರಶಸ್ತಿಗೆ ಪಾತ್ರವಾಗಿತ್ತು. 'ಕಬ್ಬಿನ ಬನದಲ್ಲಿ' ಕಾದಂಬರಿ ರಾಗಸಂಗಮ ಪತ್ರಿಕೆಯಲ್ಲಿ ಪೂರ್ಣ ಕಾದಂಬರಿಯಾಗಿ ಪ್ರಕಟಗೊಂಡಿತ್ತು. 'ಪ್ರೀತಿಸಿದವನು ನೀನೊಬ್ಬನೇ ಅಲ್ಲ ' ಕಾದಂಬರಿ ’ಬೆಳಕಿಂಡಿ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿತ್ತು. ಕಬ್ಬಿನ ಬನದಲ್ಲಿ ಹಳ್ಳಿಯ ಗೌಡನ ದೌರ್ಜನ್ಯದ ಚಿತ್ರಣವಿದೆ. ಪ್ರೀತಿಸಿದವನು… ಕಾದಂಬರಿಯಲ್ಲಿ ಲೇಖಕನೊಬ್ಬನ ಕಥೆ ಬರೆಯುವ ತಂತ್ರ ವಿವರಣೆ ಹೊಂದಿದೆ. ತಾನೇ ಸಂದರ್ಶಿಸಿ ಸಿದ್ಧಪಡಿಸುವ ಕಾದಂಬರಿಗೆ ತಾನೇ ಸಿಕ್ಕಿಕೊಂಡು ಪಾತ್ರವಾಗುವ ತಂತ್ರ ವಿನ್ಯಾಸ ಗಮನಿಸ ಬಹುದಾಗಿದೆ.
©2025 Book Brahma Private Limited.