ಗಾನ್ ವಿತ್ ದ ವಿಂಡ್

Author : ಶ್ಯಾಮಲಾ ಮಾಧವ

Pages 672

₹ 750.00




Year of Publication: 2019
Published by: ಸೃಷ್ಟಿ ಪಬ್ಲಿಕೇಷನ್ಸ್
Address: #1445, 3ನೇ ಕ್ರಾಸ್, ಕಾರ್ಪೋರೇಷನ್ ಕಾಲೋನಿ, ಗೋವಿಂದರಾಜನಗರ, ಬೆಂಗಳೂರು-560079
Phone: 9840998632, 9480966668

Synopsys

ಮಾರ್ಗರೆಟ್ ಮಿಶಲ್ ಅವರ ಇಂಗ್ಲಿಷ್ ಕಾದಂಬರಿಯ ಕನ್ನಡಾನುವಾದ ಕೃತಿ. ಗಾನ್ ವಿತ್ ದ ವಿಂಡ್ ಹತ್ತೊಂಬತ್ತನೇ ಶತಮಾನದ ಮಧ್ಯಕಾಲದಲ್ಲಿ ಅಮೆರಿಕಾದ ದಕ್ಷಿಣ ಸಂಸ್ಥಾನಗಳಿಂದ ಜೀತಪದ್ಧತಿಯನ್ನು ತೊಲಗಿಸುವ ಪಣತೊಟ್ಟ ಅಮೆರಿಕಾಧ್ಯಕ್ಷ ಅಬ್ರಹಾಂ ಲಿಂಕನ್‌ರ ಪ್ರಯತ್ನಕ್ಕೆದುರಾಗಿ, ಸಂಘಟಿತವಾಗಿ ಎದ್ದುನಿಂತ ದಕ್ಷಿಣದ ಹದಿಮೂರು ಪ್ರಾಂತ್ಯಗಳ “ಸಂಘಟನೆಯ' ಧೈಯ, ಸಾಧನೆಯು, ಯುದ್ದದ ಬೀಸುಗಾಳಿಗೆ ಸಿಲುಕಿ ಮೂರಾಬಟ್ಟೆಯಾಗುವ ಕಥಾನಕ “ಗಾನ್ ವಿತ್ ದ ವಿಂಡ್”ನ ಆರಂಭ, ಪ್ರಬಲವಾದ ಈ ಸುಳಿಗಾಳಿಗೀಡಾದ ಆ ದಕ್ಷಿಣನಾಡ ಜೀವಚೈತನ್ಯದ ಪ್ರತೀಕವೇ ಆದ ಸ್ಕಾರ್ಲೆಟಳ ಚಿತ್ರಣದೊಂದಿಗೆ ಕಾದಂಬರಿ ತೆರೆದುಕೊಳ್ಳುತ್ತದೆ. 'ಯಾಂಕಿ'ಗಳೆಂದು ದಕ್ಷಿಣೀಯರಿಂದ ಕರೆಯಲ್ಪಡುವ ಉತ್ತರ ಅಮೆರಿಕಾದವರಾದ ಯೋಧರ ದಾಳಿಗೆ 'ಸಂಘಟನಾ ಸೇನೆ” ಧೂಳೀಪಟವಾಗುತ್ತದೆ.

ಪತನವಾದ ಸಂಘಟನೆಯ ಸೇನೆಯಂತೆಯೇ ಯುದ್ದದ ಬೀಸುಗಾಳಿಗೆ ಧೂಳೀಪಟವಾಗಿ ಹೋದ ಕೌಂಟಿಯ ಕೃಷಿಭೂಮಿ; ಸೌಧಗಳು; ಆ ನಾಗರಿಕತೆ; ನೆಲೆತಪ್ಪಿ ಪಟ್ಟಣ ಸೇರಿ ಯಾಂಕಿಗಳ ಅಮಿಷದಿಂದ ಸ್ವತಂತ್ರರಾಗಿಳಿಸಿ ದುರಳರಾದ ಕರಿಯರು; ಮುದುಕರನ್ನೂ, ಅಂಗವಿಕರನ್ನು ಹೊರತುಪಡಿಸಿ ಬೇರೆ ಪುರುಷರೇ ಇಲ್ಲದ ತನ್ನೂರಿನಲ್ಲಿ, ಕಣನಿರ್ಧಾರದ ಹಟದಿಂದ ಹದಿನಾರರ ವಯಸ್ಸಿಗೆ ತಾಯಿಯೂ, ವಿಧವೆಯೂ ಆಗಿ ಉಳಿದ ಸ್ಕಾರ್ಲೆಟ್; ಚೇತರಿಕೆಗಾಗಿ ಕಾಲಿರಿಸಿದ ಪತಿ ಚಾರ್ಲ್ಸ್ನ ಮನೆಯಾದ ಅಟ್ಲಾಂಟಾ ನಗರಿ; ಯುದ್ಧದಿಂದ ಪತನಗೊಂಡಿದ್ದರೂ, ತನ್ನಂತೆ ಹೊಸದನ್ನು ಮೇಳವಿಸಿಕೊಂಡು ಪುನರುಜ್ಜಿವಿತಗೊಂಡ ಅಟ್ಲಾಂಟಾ ರೈಲುದಾರಿ, ಕಾರ್ಖಾನೆಗಳೊಂದಿಗೆ ಬೆಳೆದು ನಿಂತ ರೀತಿ; ಅಲ್ಲಿ ನಯವಂತಿಕೆ, ಥಳಕು, ಬಳುಕಿನೊಂದಿಗೆ ಹೊಸ ನಾಗರಿಕರಾಗಿ ಬಂದ ಯಾಂಕೀ ಕುಟುಂಬಗಳು; ಭೂಮಿ ಕಬಳಿಸಲು ಬಂದ ಅವಕಾಶದ ಲಾಭಕೋರರು, ಮರೆಯಲ್ಲಿ ಈ ಸಮಾಜದಲ್ಲಿ ನಡೆದ ಕು ಕ್ಲಶ್ ಕಾನ್ ಚಳವಳಿ; ದಾರಿ ತಪ್ಪಿ ಅಂಕೆ ಮೀರಿದ ಕರಿಯರಿಂದ, ಅವರನ್ನು ಎತ್ತಿ ನಿಲ್ಲಿಸಿ, ತಮ್ಮನ್ನು ದಮನಿಸುವ ಬಿಳಿಯರಿಂದ ರಕ್ಷಿಸಿಕೊಳ್ಳುವ ಈ ಯತ್ನದಲ್ಲಿ ಪತ್ನಿಯ ಮಹತ್ವಾಕಾಂಕ್ಷೆಗೆ ತಾನೇ ಬಲಿಯಾದ ಫ್ರಾಂಕ್; ಆಷ್ಲಿಯು ತನ್ನ ಕಲ್ಪಿತ ಪ್ರೇಮವಷ್ಟೇ ಎಂದೂ, ರೈಟ್ ತನ್ನನ್ನು ಆರಾಧಿಸುವಂತೆ ಪ್ರೀತಿಸಿದ್ದನೆಂಬುದನ್ನು ಅರಿತು, ಮರಳಿ ಅವನನ್ನು ಪಡೆಯಬಯಸಿ ವಿಫಲಳಾಗಿ, ಸೋಲು ತನ್ನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿದರೂ, ಸೋಲರಿಯದ ತನ್ನ ಜನರ ಛಲದಿಂದಾಗಿ “ನಾಳೆ ಇನ್ನೂ ಕಾದಿದೆ” ಎಂದುಕೊಂಡು ವಿಶ್ವಾಸ ತಾಳುವ ಸ್ಕಾರ್ಲೆಟ್-ಲೇಖಕಿ ಮಾರ್ಗರೆಟ್ ಮಿಶೆಲ್-ಜಗತ್ತಿಗೇ ನೀಡಿದ ಭರವಸೆಯ ಸಂಕೇತ.

About the Author

ಶ್ಯಾಮಲಾ ಮಾಧವ

ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಮಂಗಳೂರಲ್ಲಿ ಜನಿಸಿದವರು, ಬೆಸೆಂಟ್ ಶಾಲೆ ಹಾಗೂ ಸೇಂಟ್ ಆಗ್ನಿಸ್‌ ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ತಂದೆ ನಾರಾಯಣ ಉಚ್ಚಿಲ್ ಹಾಗೂ ತಾಯಿ ಯು. ವಸಂತಿ, ಮಂಗಳೂರ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಹೆಸರು. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, “ಕಡಲಿನ ಕರೆ' ಕವನ, 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಿತ. 'ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಎರಡು ವರ್ಷಗಳ ಕಾರ್ಯಭಾರದಲ್ಲಿ ಕೃತಿ ...

READ MORE

Related Books