ಮೋಪ್ಲಾ ಕಾಂಡ

Author : ಗಿರಿಜಾ ಶಾಸ್ತ್ರಿ

Pages 260

₹ 100.00




Year of Publication: 2009
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಮೋಪ್ಲಾ ಕಾಂಡ ಕಾದಂಬರಿಯನ್ನು ರಚಿಸಿದವರು ವಿನಾಯಕ ದಾಮೋದರ್‌ ಸಾವರ್ಕಾರ್.‌ ಈ ಕಾದಂಬರಿಯನ್ನು ಕನ್ನಡಕ್ಕೆ ಗಿರಿಜಾ ಶಾಸ್ತ್ರಿ ಅವರು ಅನುವಾದಿಸಿದ್ದಾರೆ. ದಕ್ಷಿಣ ಭಾರತದ ಕೇರಳ ಪ್ರಾಂತದಲ್ಲಿ (ಹಿಂದೆ ’ಮಲಬಾರ್) 1920ರ ದಶಕದಲ್ಲಿ ಮೋಪ್ಲಾ(ಮಾಪ್ಪಿಳ್ಳೆ)ಗಳು ನಡೆಸಿದ ದೌರ್ಜನ್ಯಸರಣಿಯನ್ನು ವಸ್ತುವಾಗಿರಿಸಿಕೊಂಡು ವಿನಾಯಕ ದಾಮೋದರ ಸಾವರಕರ್ ಅವರು 1926ರಲ್ಲಿ ಕಾದಂಬರಿಯ ರೂಪದಲ್ಲಿ ಬರೆದ ಕೃತಿ, ’ಮೋಪ್ಲಾ ಕಾಂಡ’ (ಮರಾಠಿ ಮೂಲದ ಹೆಸರು – ’ಮಲಾ ಕಾಯ್ ತ್ಯಾಚೇ).. ಗಾಂಧಿಯವರು ಕೈಗೊಂಡ ಖಿಲಾಫತ್ ಆಂದೋಲನದ ಹಿಂದುಗಡೆ ಗರಿಗೆದರಿದ ಬಂಡಾಯದ ಪರಿಣಾಮವಾಗಿ ಸ್ವಾತಂತ್ರ್ಯಪರ ರಾಷ್ಟ್ರೀಯಾಂದೋಲನ ಮಾರ್ಗಚ್ಯುತವಾಯಿತು. ಅಗಾಧ ಪ್ರಮಾಣದ ನರಹತ್ಯೆ ಮತ್ತು ಇಸ್ಲಾಮಿಗೆ ಮತಾಂತರ, ಲೂಟಿ-ಹಿಂಸಾಚರಣೆ, ಜೀವಹಾನಿ-ಆಸ್ತಿಹಾನಿಗಳು ಆದವು. ಆಂಗ್ಲಪ್ರಭುತ್ವದ ಸೇನೆಯು ದೃಢ ಪ್ರಯತ್ನದಿಂದ ಬಂಡಾಯವನ್ನು ಅಡಗಿಸಬೇಕಾಯಿತು. ಆ ಘಟನಾವಳಿಯ ಪರಿಣಾಮಪರಂಪರೆ ಎಂಟು ದಶಕಗಳ ತರುವಾಯವೂ ಜೀವಂತವಿದೆ. ಈ ಕಾರಣದಿಂದ ’ಮೋಪ್ಲಾ ಕಾಂಡ’ದ ಯಥಾರ್ಥ ಚಿತ್ರಣವನ್ನು ಇಂದಿನ ಪೀಳಿಗೆಯ ಮುಂದಿರಿಸುವ ಉದ್ದೇಶದಿಂದ ಈ ಕನ್ನಡಾನುವಾದ ಹೊರತರಲಾಗಿದೆ ಎಂದು ಈ ಕಾದಂಬರಿಯ ಕುರಿತಾಗಿ ಹೇಳಲಾಗಿದೆ.

About the Author

ಗಿರಿಜಾ ಶಾಸ್ತ್ರಿ
(16 September 1958)

ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು  1958 ಸೆಪ್ಟೆಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೂಜನಾಗೆ ’ಕಥೆ ಹೇಳೆ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ನೇಸರು ಸಂಪಾದಕಿಯಾಗಿದ್ದರು.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು. ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ...

READ MORE

Related Books