
ರೇಖಾ ವಿ.ಬನ್ನಾಡಿ ಅವರ ‘ಖಾದಿಯಲ್ಲಿ ಅರಳಿದ ಸಂತ ಸಂಜೀವನಾಥ ಐಕಳ’ ಕೃತಿಯು ಸಮಾಜಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಸಿಕೊಂಡಿದ್ದ ಮಹಾನ್ ವ್ಯಕ್ತಿತ್ವದ ಸಂಜೀವನಾಥ ಐಕಳ ಅವರ ಜೀವನ ಚಿತ್ರಣವಾಗಿದೆ. ಈ ಕೃತಿಗೆ ಪ್ರೊ.ಪಾ ಶ್ರೀಪತಿ ತಂತ್ರಿ ಅವರು ಮುನ್ನುಡಿ ಬರೆದಿದ್ದಾರೆ. ‘ಈ ಕಿರುಹೊತ್ತಿಗೆಯಲ್ಲಿ ರೇಖಾ ಬನ್ನಾಡಿವರು ನೇರವಾದರೂ ದೀರ್ಘವಾಗಿ ಪರಿಚಯಿಸಿದಂತೆ, ಐತಾಳರಲ್ಲಿ ನಾವೆಲ್ಲರೂ ಗುರುತಿಸಬೇಕಾದ ಅಂಶ, - ಅವರು ಸಾಮಾನ್ಯರಂತೆ ಕೇವಲ ಒಬ್ಬ ಒಳ್ಳೆಯ ವ್ಯಕ್ತಿಯೆಂದಲ್ಲ. ಒಳ್ಳೆಯ ಗಂಡನಾಗಿ, ಮಕ್ಕಳಿಗೆ ತಂದೆಯಾಗಿ ಕೌಟುಂಬಿಕ ಯಜಮಾನನಾಗಿಬದುಕಿದರೆಂಬುದಕ್ಕಾಗಿ ಅಲ್ಲ. ಅವರ ಪೂರ್ತಿ ಜೀವನ ಸಮಾಜಕ್ಕಾಗಿ ಎತ್ತಿದ ಅವತಾರವೆಂದೇ ನನಗೆ ಕಾಣುತ್ತದೆ. ಅವರ ಬದುಕಿನ ಪ್ರತಿಯೊಂದು ಕ್ಷಣವೂ ದೇಶದ ನೆನಪಿನಲ್ಲಿ ಸಮಾಜದ ಒಳಿತಿಗಾಗಿ ತುಡಿಯುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿ ಬಲ್ಲೆ. ಬದುಕಿನಾದ್ಯಂತ ಮಾನವೀಯ ಮೌಲ್ಯಗಳನ್ನು, ಆದರ್ಶಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಾಲಗತಿಯಲ್ಲಿ ಸಾಗುತ್ತಿರುವಾಗ ದಾರಿಯೆಲ್ಲ ಬೆಂಕಿಮಯವಾಗಿದ್ದರೂ ದಾರಿಬದಲಿಸದೆ ಒಂಭತ್ತು ದಶಕಗಳ ಸುದೀರ್ಘ ಪಯಣವನ್ನು ನಗು ಮುಖದಲ್ಲೇ ಪೂರ್ತಿಗೊಳಿಸಿದ ಪರಿಶುದ್ಧ ಮಾನವನ ಕತೆ- ಎಲ್ಲರೂ ಓದಲೇ ಬೇಕಾದ್ದು.ಓದುವಾಗ, ಹರಿಶ್ಚಂದ್ರನ ಪತ್ನಿಯಂತೆ ಹಿಂಬಾಲಿಸಿ ಸಾಗಿದ ಅವರ ಮಡದಿಯನ್ನು ಮರೆತ್ಲಿ, ಓದು ಅಪೂರ್ಣವಾದೀತು’ ಎಂಬುದಾಗಿ ಮುನ್ನುಡಿಯಲ್ಲಿ ಪ್ರೊ.ಪಾ ಶ್ರೀಪತಿ ತಂತ್ರಿ ಬರೆದಿದ್ದಾರೆ.
©2025 Book Brahma Private Limited.