ಬಿರು ಬಿಸಿಲೊಳಗಣ ಕನ್ನಡದ ಹಾದಿ

Author : ನಿಷ್ಠಿ ರುದ್ರಪ್ಪ

Pages 176

₹ 100.00




Year of Publication: 2016
Published by: ಗೌತಮ ಬುಕ್ ಹೌಸ್
Address: ಕಮಲಾಪುರ, ಹೊಸಪೇಟೆ ತಾಲೂಕು, ಜಿಲ್ಲೆ: ಬಳ್ಳಾರಿ-583276

Synopsys

‘ಬಿರುಬಿಸಿಲೊಳಗಣ ಕನ್ನಡ ಹಾದಿ’ ಈ ಕೃತಿಯನ್ನು ಲೇಖಕ ನಿಷ್ಠಿ ರುದ್ರಪ್ಪ ಅವರು ರಚಿಸಿದ್ದಾರೆ.ಬಿರುಬಿಸಿಲಿನ ಬಳ್ಳಾರಿಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ನಾಡಿನುದ್ದಗಲಕ್ಕೂ ಸಂಚರಿಸಿ, ಕನ್ನಡ ನಾಡು-ನುಡಿ, ಜನಜೀವನ, ಪ್ರಾಚೀನ ಕಾವ್ಯಗಳು, ಜನಪದ ಗೀತೆಗಳು ಆಚರಣೆಗಳು, ನಂಬಿಕೆಗಳು, ವ್ಯಕ್ತಿ ವಿಶೇಷಗಳು, ಕರ್ನಾಟಕ ಏಕೀಕರಣ, ಹೋರಾಟ, ಬಳ್ಳಾರಿ ಕನ್ನಡ ನಾಡಿನಲ್ಲಿ ಉಳಿದ ಬಗೆಯನ್ನು ಕನ್ನಡೇತರರ ಕನ್ನಡ ಸೇವೆ ಹೀಗೆ ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಬರುವ ಎಲ್ಲಾ ಐತಿಹಾಸಿಕ ಸಂಗತಿಗಳು ಅವುಗಳ ಪ್ರಾಮುಖ್ಯತೆಯನ್ನು ವಿವರಿಸುವದರ ಜೊತೆಗೆ ಜಾಗತೀಕರಣ ಇಂದಿನ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆನ್ನುವ ವೈಜ್ಞಾನಿಕ ವಿಶ್ಲೇಷಣೆಯನ್ನುಕೊಡಲಾಗಿದೆ. ಇದು ಸಂಶೋಧಾ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಿದೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books