ದೇಸಿ ಆಹಾರ ಪದ್ಧತಿ

Author : ಪ್ರಸನ್ನ

Pages 112

₹ 72.00




Year of Publication: 2013
Published by: ಒಂಟಿದನಿ ಪ್ರಕಾಶನ
Address: ಹೆಗ್ಗೋಡು, ತಾ: ಸಾಗರ ಜಿ: ಶಿವಮೊಗ್ಗ

Synopsys

ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಬರೆದ ಚಿಂತನಾರ್ಹ ಕೃತಿ -ದೇಸಿ ಆಹಾರ ಪದ್ಧತಿ. ಪ್ರಕೃತಿಯಿಂದ ಮನುಷ್ಯನಿಗೆ ಆಹಾರ ಸಿಗುತ್ತದೆ. ಆದರೆ, ಮನುಷ್ಯ ಮಾತ್ರ ಪ್ರಕೃತಿಯನ್ನು ತನ್ನ ಸ್ವಾರ್ಥಕ್ಕಾಗಿ ಮನಬಂದಂತೆ ಉಪಯೋಗಿಸುತ್ತಿದ್ದು, ದ್ರೋಹವೆಸಗುತ್ತಿದ್ದಾನೆ. ಇದರಿಂದ ಆಹಾರದ ಕೊರತೆ ಉಂಟಾಗುತ್ತಿದೆ. ಆಹಾರದ ಶೈಲಿಯು ಬದಲಾಗುತ್ತಿದೆ. ಇಂದರಿಂದ, ಪ್ರಕೃತಿಗೆ ಪೂರಕವಾಗಿರುವ ದೇಸಿ ಆಹಾರ ಪದ್ಧತಿ ಕಣ್ಮರೆಯಾಗುತ್ತಿದ್ದು, ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರಿಂದ, ದೇಸಿ ಆಹಾರ ಪದ್ಧತಿಯನ್ನು ಉಳಿಸಿಕೊಳ್ಳುವುದು ಪ್ರಮುಖ ಎಂಬ ಚಿಂತನೆಯುಳ್ಳ ಕೃತಿ ಇದು.

About the Author

ಪ್ರಸನ್ನ
(23 March 1951)

ಖ್ಯಾತ ರಂಗಕರ್ಮಿ ಪ್ರಸನ್ನ ‌ಅವರು ಜನಿಸಿದ್ದು ಮಾರ್ಚ್ 23, 1951 ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದವರು.  ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.  ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ...

READ MORE

Related Books